Bengaluru, ಮೇ 16 -- ಸೀತಾ ರಾಮ ಧಾರಾವಾಹಿ ವೀಕ್ಷಕರಿಗೆ ಒಂದಾದ ಮೇಲೊಂದು ಅಚ್ಚರಿಗಳು ದಕ್ಕುತ್ತಿವೆ. ಭಾರ್ಗವಿಗೂ ಸಿಹಿಯ ಕಣ್ಣಾಮುಚ್ಚಾಲೆ ಆಟ ಭಯ ಹುಟ್ಟಿಸಿತ್ತು. ಸಿಹಿಯ ಆತ್ಮ ಇರುವುದೂ ಭಾರ್ಗವಿಗೆ ಗೊತ್ತಾಗಿದೆ. ಅದಕ್ಕೆ ಸಿಹಿ ಸುಬ್ಬಿಯನ್ನು ದೂರ ಮಾಡಿ ಗೆದ್ದು ಬೀಗಿದ್ದಾಳೆ. ಇತ್ತ ಸಿಹಿ ಸಾವಿನ ಸುದ್ದಿ ಭಾರ್ಗವಿ ಹೇಳಿದ್ದಾಳೆ. ಅದು ಸೀತಾ ಕಿವಿಗೂ ಬಿದ್ದಿದೆ.

ಸೀತಾ ರಾಮ ಸೀರಿಯಲ್‌ನ ಇಂದಿನ ಸಂಚಿಕೆಯ ಪ್ರೋಮೋವನ್ನು ಜೀ ಕನ್ನಡ ಬಿಡುಗಡೆ ಮಾಡಿದೆ. ಆ ಪ್ರೋಮೋದಲ್ಲಿ ಸಿಹಿಯ ಸಾವಿನ ವಿಚಾರವನ್ನೈ ಹೈಲೈಟ್‌ ಮಾಡಲಾಗಿದೆ.

ಭಾರ್ಗವಿಯ ಕೆಟ್ಟ ಕೆಲಸಗಳನ್ನು ಇಲ್ಲಿಯವರೆಗೂ ತನ್ನೊಳಗೆ ಹುದುಗಿಸಿಟ್ಟುಕೊಂಡಿದ್ದ ಸತ್ಯಜೀತ್‌, ಇದೀಗ ಅದೇ ಸತ್ಯವನ್ನು ಅಪ್ಪ ಸೂರ್ಯ ಪ್ರಕಾಶ್‌ ಮುಂದೆ ಹೇಳಲು ಬಂದು ನಿಂತಿದ್ದಾನೆ.

"ನಿಮ್ಮೆಲ್ಲರಿಗೂ ಸತ್ಯ ಏನು ಅಂತ ಗೊತ್ತಾಗಬೇಕು. ಅದನ್ನು ಹೇಳಲೆಂದೇ ನಾನಿಲ್ಲಿ ಬಂದಿದ್ದೇನೆ" ಎಂದಿದ್ದಾನೆ ಸತ್ಯ. "ಏನು ಸತ್ಯ ಹೇಳ್ತಾನೋ ಕೇಳಿಬಿಡೋಣ" ಎಂದು ಸೂರ್ಯಪ್ರಕಾಶ್‌ ಹೇಳಿದ್ದಾನೆ.

"ನಾನು ನನ್ನ ಅಣ್ಣ...