Bangalore, ಮೇ 14 -- ಬೆಂಗಳೂರು: ಬೇಸಿಗೆ ರಜೆ ನಂತರವೂ ಇರುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆಯು ಬೆಂಗಳೂರಿನ ಹೊರಡುವ ಕೆಲವು ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿದೆ. ಬೆಂಗಳೂರು ಹಾಗೂ ಕೇರಳದ ತಿರುವನಂತಪುರಂ, ಸಾಂತ್ರಗಚಿ-ಯಶವಂತಪುರ ಸಾಪ್ತಾಹಿಕ ವಿಶೇಷ ರೈಲು ಸೇವೆಗಳು ವಿಸ್ತರಣೆಯಾಗಿವೆ. ಎರಡು ಜೋಡಿ ವಿಶೇಷ ರೈಲುಗಳ ವಿಸ್ತೃತ ಸಂಚಾರವನ್ನು ಮೇ 30 ರವರೆಗೆ ನಡೆಸಲು ಮೊದಲೇ ಸೂಚಿಸಲಾಗಿದ್ದ ರೈಲು ಸಂಖ್ಯೆ 06555 SMVT ಬೆಂಗಳೂರು-ತಿರುವನಂತಪುರಂ ಉತ್ತರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಜೂನ್ 6 ರಿಂದ ಸೆಪ್ಟೆಂಬರ್ 26 ರವರೆಗೆ 17 ಹೆಚ್ಚುವರಿ ಸೇವೆ ನೀಡಲಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ರೈಲ್ವೆ ಈ ಕೆಳಗಿನ ವಿಶೇಷ ರೈಲು ಸೇವೆಗಳನ್ನು ಅಸ್ತಿತ್ವದಲ್ಲಿರುವ ಸಮಯ ಹಾಗೂ ನಿಲುಗಡೆಗಳೊಂದಿಗೆ ವಿಸ್ತರಣೆ ಮಾಡಲಾಗಿದೆ ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಮೇ 30 ರವರೆಗೆ ನಡೆಸಲು ಮೊದಲೇ ಸೂಚಿಸಲಾಗಿದ್ದ ರೈಲು ಸಂಖ್ಯೆ 06555 SMVT ಬೆಂಗಳೂರು-...