ಭಾರತ, ಮೇ 12 -- ಕವಲೂರು ಜಾತ್ರೆ 2025: ಕೊಪ್ಪಳ ತಾಲೂಕು ಕವಲೂರು ಜಾತ್ರೆ ಆರಂಭವಾಗಿದ್ದು, ಇಂದು (ಮೇ 12) ದುರ್ಗಾದೇವಿ ತೇರು ನಡೆಯಲಿದೆ. ದುರ್ಗೆಯ ಜಾತ್ರೆ ಅಂದರೆ ಈ ಭಾಗದಲ್ಲಿ ಕುರಿ, ಕೋಣ ಬಲಿ ಕೊಟ್ಟು ಉತ್ಸವ ನಡೆಸುವುದು ಸಾಮಾನ್ಯ. ಆದರೆ, ಕವಲೂರು ಜಾತ್ರೆ ಹಾಗಲ್ಲ. ದುರ್ಗಾದೇವಿ ಹಾಗೂ ಪಾರ್ವತಿ ಪರಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾವೈಕ್ಯ ಹಾಗೂ ರಾಷ್ಟ್ರಪ್ರೇಮ ಸಾರುವ ರಥೋತ್ಸವ ಇಂದು ನಡೆಯಲಿದೆ. ದೇಶಪ್ರೇಮ ಸಾರುವ ಈ ರಥೋತ್ಸವ ಬಹಳ ವಿಶೇಷ.
ಕೊಪ್ಪಳ ತಾಲೂಕು ಕವಲೂರು ಗ್ರಾಮದ ದುರ್ಗಾದೇವಿ ಸ್ವಲ್ಪ ವಿಶೇಷ. ಜಾತಿ ಭೇದವಿಲ್ಲದೇ ಗ್ರಾಮಸ್ಥರು ಒಂದಾಗಿ ಕವಲೂರು ಜಾತ್ರೆಯನ್ನು ಆಚರಿಸುವ ಪರಿಪಾಠಕ್ಕೆ ಬಹಳ ಹಳೆಯದು. ಯಾವುದೇ ಜಾತ್ರೆ ನಡೆದಾಗಲೂ ರಥೋತ್ಸವಕ್ಕೆ ತೇರು ಅಲಂಕರಿಸುವಾಗ ಅದರ ತುತ್ತ ತುದಿಗೆ ಧರ್ಮ ಧ್ವಜ ಜೋಡಿಸುವುದು ವಾಡಿಕೆ. ಆದರೆ ದುರ್ಗಾ ದೇವಿ ತೇರು ಕೂಡ ವಿಶೇಷ. ಇಲ್ಲಿ ಧರ್ಮ ಧ್ವಜದ ಬದಲು ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಈ ರೀತಿಯಾಗಿ ಇದು ರಾಷ್ಟ್ರಪ್ರೇಮ, ರಾಷ್ಟ್ರಪ್ರಜ್ಞೆಯನ್ನು ಜಾಗೃ...
Click here to read full article from source
To read the full article or to get the complete feed from this publication, please
Contact Us.