Bangalore, ಮೇ 14 -- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಎರಡನೇ ಬಾರಿಗೆ ಸಚಿವರಾಗಿರುವ ಪ್ರಿಯಾಂಕ್‌ ಖರ್ಗೆ ಈ ಬಾರಿ ವಿವಾದದ ಹೇಳಿಕೆಗಳ ಮೂಲಕವೇ ಸದ್ದು ಮಾಡುತ್ತಿದ್ದಾರೆ. ಎರಡು ಪ್ರಮುಖ ಖಾತೆ ಜತೆಗೆ ಕಲಬುರಗಿ ಉಸ್ತುವಾರಿ ಸಚಿವ ಸ್ಥಾನ ಹೊಂದಿದ್ದರೂ ನಿರೀಕ್ಷೆಯಷ್ಟು ಕೆಲಸ ಮಾಡಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ಹಿರಿಯ ನಾಯಕ ಕೆ.ಎನ್‌.ರಾಜಣ್ಣ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಸಹಕಾರ ಇಲಾಖೆ ಜತೆಗೆ ಹಾಸನ ಉಸ್ತುವಾರಿ ಸಚಿವರೂ ಹೌದು. ಎರಡು ವರ್ಷದಲ್ಲಿ ಅವರು ಇಲಾಖೆಗಿಂತ ರಾಜಕೀಯ ಹೇಳಿಕೆಗಳ ಮೂಲಕವೇ ಸುದ್ದಿಯಾದವರು, ಹಿರಿಯ ಸಹಕಾರಿಯಾದರೂ ಸಹಕಾರಿ ಇಲಾಖೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲಿಲ್ಲ ಎನ್ನುವ ಅಭಿಪ್ರಾಯ ಸರ್ಕಾರದ ಮಟ್ಟದಲ್ಲಿದೆ.

ಸಿದ್ದರಾಮಯ್ಯ ಸಂಪುಟ ಅತ್ಯಂತ ಹಿರಿಯ ಶಾಸಕರಲ್ಲಿ ಒಬ್ಬರಾದ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್‌ ಅವರು ಎರಡನೇ ಬಾರಿ ಸಚಿವ. ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರಾಗಿ ಬೆಂಗಳೂರು, ಮೈಸೂರಿಗೆ ಸೀಮಿತರಾದರು. ಕರ್ನಾಟಕದ ಹಲವು ಜಿಲ್ಲೆಗ...