ಭಾರತ, ಮಾರ್ಚ್ 26 -- ರಾಮಾಚಾರಿ ಧಾರಾವಾಹಿಯಲ್ಲಿ ಚಾರು, ರಾಮಾಚಾರಿಯ ಬಗ್ಗೆ ತುಂಬಾ ಆಲೋಚನೆ ಮಾಡುತ್ತಿದ್ಧಾಳೆ. ರಾಮಾಚಾರಿ ಬೇರೆ ಯಾರನ್ನಾದರೂ ಮದುವೆ ಆದರೆ ತನ್ನ ಗತಿ ಏನು ಎಂದು ಅವಳಿಗೆ ಅಳುಕಾಗುತ್ತಿದೆ. ರಾಮಾಚಾರಿ ಎಷ್ಟೇ ಧೈರ್ಯ ಹಾಗೂ ಭರವಸೆ ನೀಡಿದರೂ ಸಹ ಚಾರುಗೆ ಸಮಾಧಾನ ಆಗುತ್ತಿಲ್ಲ. ಚಾರು ತುಂಬಾ ಅನವಶ್ಯಕ ಚಿಂತೆ ಮಾಡುತ್ತಿದ್ದಾಳೆ. ರಾಮಾಚಾರಿ ಅವಳನ್ನು ಬಿಟ್ಟು ಇನ್ಯಾರನ್ನೂ ಮದುವೆ ಆಗೋದಿಲ್ಲ ಎಂದು ಹೇಳಿದರೂ ಚಾರು ಆತಂಕ ಕಡಿಮೆ ಆಗುತ್ತಿಲ್ಲ. ಅದೇ ಕಾರಣಕ್ಕೆ ಅವಳು ಜಾನಕಿ ಬಳಿಯೂ ಈ ವಿಚಾರವನ್ನು ಹೇಳಿಕೊಳ್ಳುತ್ತಾಳೆ. ಜಾನಕಿ ಬಳಿ ಹೋಗಿ ನೀವೇ ನನ್ನ ತಲೆಕೆಡುವಂತೆ ಮಾಡಿದ್ದು ಎನ್ನುತ್ತಾಳೆ.

ಆಗ ಜಾನಕಿ ಆಶ್ಚರ್ಯದಿಂದ ತಾನೇನು ಮಾಡಿದ್ದೇನೆ ಎಂದು ಆಲೋಚನೆ ಮಾಡುತ್ತಾಳೆ. ಚಾರು ಹೇಳುತ್ತಾಳೆ "ನೀವು ಅಂದು ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದುವೆ ಆಗುತ್ತೆ ಎಂದು ಹೇಳಿದ್ರಿ. ಅದೇ ಕಾರಣಕ್ಕೆ ನಾನು ಈಗ ತಲೆ ಕೆಡಿಸಿಕೊಂಡಿರೋದು" ಎಂದು ಹೇಳುತ್ತಾಳೆ. ಅದಕ್ಕೆ ಜಾನಕಿ ನಗುತ್ತಾಳೆ. ಅದೆಲ್ಲ ನಿಜ ಆಗೋದಿಲ್ಲ ಎಂದು ...