Bengaluru, ಮೇ 24 -- ಮಳೆಗಾಲ ಆರಂಭವಾದ ತಕ್ಷಣ ಮಂಗಳೂರು ಬೆಂಗಳೂರು ಸಂಪರ್ಕದ ಶಿರಾಡಿ ಘಾಟಿಯಲ್ಲಿ ಸಂಚರಿಸುವವರು ಮಂಗಳೂರಿಗರಿಗೆ ಕೇಳುವ ಮೊದಲ ಪ್ರಶ್ನೆ ಇದು. ''ಹೇಗೆ? ಶಿರಾಡಿ ಘಾಟ್ ನಲ್ಲಿ ಹೋಗ್ಬಹುದಾ?'' ಕರಾವಳಿ ಕರ್ನಾಟಕವನ್ನು ರಾಜಧಾನಿ ಸಹಿತ ನಾಡಿನ ಇತರ ಪ್ರದೇಶಗಳಿಗೆ ಬೆಸೆಯುವ ಘಾಟಿಗಳಲ್ಲಿ ಅತ್ಯಂತ ಸುಲಭವಾಗಿ ಸಾಗಬಹುದಾದ ರಸ್ತೆ ಶಿರಾಡಿ. ಸದ್ಯದ ಮಟ್ಟಿಗೆ ಉಳಿದ ಘಾಟ್ಗಳಿಗಿಂತ ಶಿರಾಡಿ ಘಾಟ್ ಪರವಾಗಿಲ್ಲ, ಕಾಮಗಾರಿ ನಡೆಯುತ್ತಿದ್ದರೂ ವಾಹನ ಸುಗಮ ಸಂಚಾರಕ್ಕೆ ಅಡ್ಡಿಯೇನಿಲ್ಲ.
ಸಂಪಾಜೆ, ಬಿಸಿಲೆ, ಶಿರಾಡಿ, ಚಾರ್ಮಾಡಿ, ಆಗುಂಬೆ, ಬಾಳೆಬರೆ ಮತ್ತು ನಿಟ್ಟೂರು ಘಾಟಿಗಳ ಪೈಕಿ ಯಾವುದು ಕೂಡ ಮಳೆಗಾಲದಲ್ಲಿ ಸಂಪೂರ್ಣ ಸುರಕ್ಷಿತವಾಗಿ ಉಳಿದಿಲ್ಲ ಎಂಬುದು ಕಳೆದ ಕೆಲ ವರ್ಷಗಳ ಇತಿಹಾಸದಿಂದ ಗೊತ್ತಾಗುತ್ತದೆ.
ಮಳೆಗಾಲದಲ್ಲಿ ಒಂದು ಕಡೆ ವಿಮಾನ ಯಾನ ಅನಿಶ್ಚಿತತೆಗೆ ತಳ್ಳುತ್ತದೆ, ಮತ್ತೊಂದು ಕಡೆ ಮಂಗಳೂರು- ಬೆಂಗಳೂರು ರೈಲು ಮಾರ್ಗ ಕೂಡ ಪದೇ ಪದೇ ಭೂಕುಸಿತದ ಭೀತಿಗೆ ತುತ್ತಾಗುತ್ತದೆ. ಇಂಥ ಸಂದರ್ಭದಲ್ಲಿ ಏಕೈಕ ಆಸರೆಯಾಗ...
Click here to read full article from source
To read the full article or to get the complete feed from this publication, please
Contact Us.