Bengaluru, ಮೇ 25 -- ನವದೆಹಲಿ: ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಅವರು ಭಾನುವಾರ ಬಹ್ರೇನ್‌ನಲ್ಲಿ ನಡೆದ ಸರ್ವಪಕ್ಷ ನಿಯೋಗದ ಸಂವಾದದಲ್ಲಿ ಪಾಕಿಸ್ತಾನವನ್ನು ವಿಫಲ ರಾಷ್ಟ್ರ ಎಂದು ಕರೆದಿದ್ದಾರೆ. ಜತೆಗೆ ನೆರೆಯ ರಾಷ್ಟ್ರದ ಯಾವುದೇ ಆಕ್ರಮಣದ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳುವ ಭಾರತದ ಸಾಮರ್ಥ್ಯವನ್ನು ಪುನರುಚ್ಚರಿಸಿದ್ದಾರೆ. ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಸರ್ವಪಕ್ಷ ರಾಜತಾಂತ್ರಿಕ ನಿಯೋಗದಲ್ಲಿ ಅಸಾದುದ್ದೀನ್ ಒವೈಸಿ ಅವರು ಕೂಡ ಬಹ್ರೇನ್‌ಗೆ ತೆರಳಿದ್ದು, ಸರ್ಕಾರ ಮತ್ತು ಮಾಧ್ಯಮಗಳು, ನಮ್ಮ ವಾಯು ರಕ್ಷಣಾ ವ್ಯವಸ್ಥೆ, ನಮ್ಮ ತಂತ್ರಜ್ಞಾನ ಮತ್ತು ಯುದ್ಧ ಸಾಮರ್ಥ್ಯಗಳು ಪಾಕಿಸ್ತಾನದಂತಹ ವಿಫಲ ರಾಷ್ಟ್ರವು ಪ್ರಾರಂಭಿಸಿದ ಎಲ್ಲವನ್ನೂ ಯಶಸ್ವಿಯಾಗಿ ತಡೆದು ತಟಸ್ಥಗೊಳಿಸಿವೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಯೊಬ್ಬ ಭಾರತೀಯನ ಜೀವವನ್ನು ರಕ್ಷಿಸಲು ನಮ್ಮ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಮುಂದಿನ ಬಾರಿ ಪಾಕಿಸ್ತಾನ ಈ ದುಷ್ಕೃತ್ಯವನ್ನು ಕೈಗೊಂಡಾಗ, ಅದು ಅವರು ನಿರೀಕ್ಷಿಸಿದ್ದಕ್ಕಿಂತ ಹ...