Mysuru, ಮಾರ್ಚ್ 29 -- ಮೈಸೂರು: ಮೈಸೂರು ಜಿಲ್ಲೆಯ ಯುಗಾದಿ ಹಬ್ಬದ ಸಂಭ್ರಮದಲಿದ್ದ ಈ ಮೂರು ಮನೆಗಳಲ್ಲಿ ಹಬ್ಬದ ಮುನ್ನಾ ದಿನ ಸೂತಕದ ಛಾಯೆ ಆವರಿಸಿದೆ. ಭಾನುವಾರ ನಡೆಯಲಿರುವ ಈ ಸಾಲಿನ ಯುಗಾದಿ ಹಬ್ಬಕ್ಕೆ ಹಸುಗಳನ್ನು ತೊಳೆಯಲು ಹೋದ ಮೂವರು ಕೆರೆ ಪಾಲಾಗಿ ಜೀವ ಕಳೆದುಕೊಂಡಿರುವ ದುರಂತ ಘಟನೆ ನಡೆದಿದೆ. ಒಂದೇ ಗ್ರಾಮದ ಮೂವರು ಯುಗಾದಿ ಹಬ್ಬಕ್ಕೆ ರಾಸುಗಳನ್ನು ತಯಾರು ಮಾಡಲೆಂದು ಹೋಗಿದ್ದು ಕೆರೆಗೆ ಹೋಗಿದ್ದರು. ಈ ವೇಳೆ ಒಬ್ಬಾತ ಕೆರೆಯೊಳಗೆ ಹಸು ಹಿಡಿಯಲು ಹೋಗಿ ಕಾಲು ಜಾರಿ ಬಿದ್ದಿದ್ದಾನೆ. ಈತನನ್ನು ರಕ್ಷಿಸಲು ಹೋದ ಇನ್ನೂ ಇಬ್ಬರೂ ಕೂಡ ಕೆರೆ ಪಾಲಾಗಿದ್ದಾರೆ. ಈ ಘಟನೆ ನಡೆದಿರುವುದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಾಮಳ್ಳಿ ಗ್ರಾಮದಲ್ಲಿ. ಕಾಮಳ್ಳಿಯ ನಿವಾಸಿಗಳಾದ ಮುದ್ದೇಗೌಡ (48), ಬಸವೇಗೌಡ (45), ವಿನೋದ್ (17) ಮೃತ ದುರ್ದೈವಿಗಳು.
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.