Bengaluru, ಫೆಬ್ರವರಿ 25 -- ಅರ್ಥ: ಧರ್ಮಾತ್ಮರಾದ ಬ್ರಾಹ್ಮಣರು, ಭಕ್ತರು ಮತ್ತು ರಾಜರ್ಷಿಗಳ ವಿಷಯದಲ್ಲಿ ಇದು ಇನ್ನಷ್ಟು ನಿಜ. ಆದುದರಿಂದ ಈ ಅಶಾಶ್ವತವಾದ ಮತ್ತು ದುಃಖದ ಲೋಕಕ್ಕೆ ಬಂದಿರುವ ನೀನು ನನ್ನ ಪ್ರೇಮಪೂರೈಕ ಸೇವೆಯಲ್ಲಿ ನಿರತನಾಗು.
ಭಾವಾರ್ಥ: ಈ ಐಹಿಕ ಜಗತ್ತಿನಲ್ಲಿ ಜನರ ಬೇರೆ ಬೇರೆ ವರ್ಗಗಳುಂಟು. ಏನೇ ಆಗಲಿ, ಈ ಜಗತ್ತು ಯಾರಿಗೂ ಸುಖದ ತಾಣವಲ್ಲ. 'ಅನಿತ್ಯಮ್ ಅಸುಖಮ್ ಲೋಕಮ್' ಈ ಲೋಕವು ಅಶಾಶ್ವತವಾಗಿದ್ದು, ದುಃಖಗಳಿಂದ ತುಂಬಿಹೋಗಿದೆ. ಇದು ಯಾವುದೇ ವಿವೇಕಯುಕ್ತನಾದ ಯೋಗ್ಯ ಮನುಷ್ಯನು ವಾಸಮಾಡುವಂತಹ ಸ್ಥಳವಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ದೇವೋತ್ತಮ ಪರಮ ಪುರುಷನು ಈ ಪ್ರಪಂಚವು ಅಶಾಶ್ವತ ಮತ್ತು ಇದು ದುಃಖಗಳಿಂದ ತುಂಬಿಹೋಗಿದೆ ಎಂದು ಹೇಳುತ್ತಾನೆ. ಕೆಲವರು ತತ್ವಶಾಸ್ತ್ರಜ್ಞರು ಅದರಲ್ಲಿಯೂ ಮಾಯಾವಾದಿ ತತ್ವಶಾಸ್ತ್ರಜ್ಞರು ಈ ಜಗತ್ತು ಮಿಥ್ಯೆ ಎಂದು ಹೇಳುತ್ತಾರೆ. ಆದರೆ ಭಗವದ್ಗೀತೆಯಿಂದ ನಾವು ಈ ಜಗತ್ತು ಮಿಥ್ಯೆಯಲ್ಲ, ಆದರೆ ಅಶಾಶ್ವತ ಎಂದು ತಿಳಿದುಕೊಳ್ಳಬಹುದು.
ಅಶಾಶ್ವತತೆಗೂ ಮಿಥ ಗೂ ವ್ಯತ್ಯಾಸವುಂಟು. ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.