Bengaluru, ಮಾರ್ಚ್ 15 -- ಅರ್ಥ: ಪರಿಶುದ್ಧಗೊಳಿಸುವವರಲ್ಲಿ ನಾನು ವಾಯು, ಶಸ್ತ್ರಧಾರಿಗಳಲ್ಲಿ ರಾಮ, ಮೀನುಗಳಲ್ಲಿ ನಾನು ಮಕರ ಮತ್ತು ಹರಿಯುವ ನದಿಗಳಲ್ಲಿ ಗಂಗಾನದಿ.
ಭಾವಾರ್ಥ: ಜಲವಾಸಿಗಳಲ್ಲಿ ಅತ್ಯಂತ ದೊಡ್ಡ ಪ್ರಾಣಿಗಳಲ್ಲಿ ತಿಮಿಂಗಿಲವು ಒಂದು. ನಿಶ್ಚಯವಾಗಿಯೂ ಅದು ಮನುಷ್ಯನಿಗೆ ಅತ್ಯಂತ ಅಪಾಯಕಾರಿ. ಅದು ಕೃಷ್ಣನ ಪ್ರತಿನಿಧಿ.
ಅರ್ಥ: ಅರ್ಜುನ, ಎಲ್ಲ ಸೃಷ್ಟಿಗಳಿಗೆ ನಾನೇ ಆದಿ, ಅಂತ್ಯ ಮತ್ತು ಮಧ್ಯ. ಎಲ್ಲ ವಿದ್ಯೆಗಳಲ್ಲಿ ನಾನು ಅಧ್ಯಾತ್ಮ ವಿದ್ಯೆಯು, ಎಲ್ಲ ತಾರ್ಕಿಕರಲ್ಲಿ ನಾನೇ ನಿರ್ಣಾಯಕ ಸತ್ಯ.
ಭಾವಾರ್ಥ: ಸೃಷ್ಟಿಯಾದ ಅಭಿವ್ಯಕ್ತಿಗಳಲ್ಲಿ ಮೊದಲನೆಯದು ಸಂಪೂರ್ಣ ಐಹಿಕ ಮೂಲಾಂಶಗಳದು. ಮೊದಲೇ ಹೇಳಿದಂತೆ, ವಿಶ್ವ ಅಭಿವ್ಯಕ್ತಿಯನ್ನು ಮಹಾವಿಷ್ಣು, ಗರ್ಭೋದಕಶಾಯಿ ವಿಷ್ಣು ಮತ್ತು ಕ್ಷೀರೋದಕಶಾಯಿ ವಿಷ್ಣು ಸೃಷ್ಟಿಮಾಡುತ್ತಾರೆ ಮತ್ತು ನಿರ್ವಹಿಸುತ್ತಾರೆ. ಅನಂತರ ಇದನ್ನು ಶಿವನು ನಾಶಮಾಡುತ್ತಾನೆ. ಬ್ರಹ್ಮನು ಗೌಣ ಸೃಷ್ಟಿಕರ್ತ, ಸೃಷ್ಟಿ, ಸ್ಥಿತಿ, ಲಯಗಳ ಈ ಶಕ್ತಿಗಳು ಪರಮ ಪ್ರಭುವಿನ ಐಹಿಕ ಗುಣಗಳ ಮೂರ್ತಿಗಳು. ಆದುದರಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.