ಭಾರತ, ನವೆಂಬರ್ 25 -- ಬೆಂಗಳೂರು: ಹಾಡು ಹಗಲಲ್ಲೇ ಮನೆಯ ಬೀಗ ಒಡೆದು ಒಳಗೆ ನುಗ್ಗಿ ಚಿನ್ನಭಾರಣ, ನಗದು ಕಳವು ಮಾಡುತ್ತಿದ್ದ ಹಳೆಯ ಕ್ರಿಮಿನಲ್‌ ಒಬ್ಬನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಧಿತನನ್ನು ಮಂಜುನಾಥ ಅಲಿಯಾಸ್‌ ಮಂಜ ಅಲಿಯಾಸ್‌ ಶಂಕರ್‌ (40) ಎಂದು ಗುರುತಿಸಲಾಗಿದೆ. ಈತ ರಾಜಾಜಿನಗರ, ಪ್ರಕಾಶ್‌ ನಗರದ ನಿವಾಸಿ. ಬಂಧಿತನಿಂದ 6.2 ಲಕ್ಷ ರೂಪಾಯಿ ಮೌಲ್ಯದ 115 ಗ್ರಾಂ ತೂಕದ ಚಿನ್ನಾಭರಣ, 30 ಗ್ರಾಂ ಬೆಳ್ಳಿಯ ಕಾಲ್ಗೆಜ್ಜೆ, ಒಂದು ಐಫೋನ್‌, ಒಂದು ಫಾಸ್ಟ್ರಾಕ್‌, ಒಂದು ಟೈಮ್ಸ್‌ ಕೈಗಡಿಯಾರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಗಡಿ ರೋಡ್‌ ಪೊಲೀಸ್‌ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈತನ ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ, ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎರಡು, ಚಾಮರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಎರಡು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎರಡು, ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಎರಡು, ಮಹಾಲಕ್ಷ್ಮೀ ಲೇಔಟ್, ಆಡುಗೋಡಿ ಪೊಲೀಸ್ ಠಾಣೆ, ಕಲಾಸಿಪಾಳ್...