ಭಾರತ, ಮಾರ್ಚ್ 23 -- ಆನೇಕಲ್ ಹುಸ್ಕೂರು ಮದ್ದೂರಮ್ಮ ಜಾತ್ರೆ ಅಂದರೆ ಕುರುಜುಗಳದ್ದೇ ಆಕರ್ಷಣೆ. ಕುರುಜುಗಳು ಅಂದರೆ ತೇರುಗಳು. ಹಿಂದೆಲ್ಲ 15 -16 ತೇರುಗಳು ಜಾತ್ರೆಯಲ್ಲಿ ಪಾಲ್ಗೊಂಡ ಇತಿಹಾಸವಿದೆ. ಈ ಬಾರಿ 6 ತೇರುಗಳಷ್ಟೇ ಇದ್ದವು. ದೇವಸ್ಥಾನದ ಇತಿಹಾಸ, ಕುರುಜುಗಳ ವಿಶೇಷ ಅಂಶಗಳ ವಿವರ ಇಲ್ಲಿದೆ.
ಬೆಂಗಳೂರು ನಗರದಿಂದ 15 ಕಿಮೀ ದೂರದಲ್ಲಿರುವ ಆನೇಕಲ್ ತಾಲೂಕು ಹುಸ್ಕೂರು ಗ್ರಾಮದಲ್ಲಿದೆ ಈ ಐತಿಹಾಸಿಕ ಮದ್ದೂರಮ್ಮ ದೇವಿ ದೇವಸ್ಥಾನ. ಗ್ರಾಮೀಣ ಸೊಗಡು ಹೊಂದಿರುವ ಈ ಜಾತ್ರೆಯಲ್ಲಿ ತೇರುಗಳೇ ಪ್ರಮುಖ ಆಕರ್ಷಣೆ. ಮದ್ದೂರಮ್ಮ ದೇವಿ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮದ ಜನರು ತೇರು ಕಟ್ಟಿ ದೇವಸ್ಥಾನದ ಆವರಣಕ್ಕೆ ತಂದು ಜಾತ್ರೆ ನಡೆಸುವುದು ವಾಡಿಕೆ.
ಹುಸ್ಕೂರು ಮದ್ದೂರಮ್ಮ ದೇವಾಲಯ 11ನೇ ಶತಮಾನದ್ದು ಎನ್ನುತ್ತಿವೆ ಐತಿಹ್ಯಗಳು, ಹೈದರಾಲಿ, ಟಿಪ್ಪು ಸುಲ್ತಾನ್ ಈ ದೇಗುಲಕ್ಕೆ ಕಾಣಿಕೆಯಾಗಿ ನೀಡಿದ ಚಿನ್ನಾಭರಣಗಳನ್ನು ಆಡಳಿತ ಮಂಡಳಿ ದಾಖಲೆಯಾಗಿ ಇಟ್ಟುಕೊಂಡಿದೆ. ಟಿಪ್ಪು ಮತ್ತು ಸೈನಿಕರು ಯಾತ್ರೆ ಮಾಡುವಾಗ ಹುಸ್ಕೂರು ಮದ್ದೂರಮ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.