Bengaluru, ಏಪ್ರಿಲ್ 29 -- ಬಿಗ್‌ ಬಾಸ್‌ ಮುಗಿದ ಬಳಿಕ ಕಲರ್ಸ್‌ ಕನ್ನಡದಲ್ಲಿ ಶುರುವಾದ ಸೀರಿಯಲ್‌ ವಧು. ಇದೀಗ ಇದೇ ಧಾರಾವಾಹಿ ಮುಗಿಯುವ ಹಂತದಲ್ಲಿದೆ ಎಂಬ ಚರ್ಚೆ ಕಿರುತೆರೆ ವಲಯದಲ್ಲಿ ಶುರುವಾಗಿದೆ. ಇನ್ನೇನು ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕಲರ್ಸ್‌ ಕನ್ನಡವಾಗಲಿ, ಆ ಧಾರಾವಾಹಿಯ ನಾಯಕಿ, ಕಲಾವಿದರು ಯಾರೂ ಹೇಳಿಕೊಂಡಿಲ್ಲ. ಟಿಆರ್‌ಪಿಯಲ್ಲಿ ಮೋಡಿ ಮಾಡದ ಕಾರಣಕ್ಕೆ ಈ ಧಾರಾವಾಹಿ ಶೀಘ್ರದಲ್ಲಿ ಅಂತ್ಯವಾಗಲಿದೆ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ. ಈ ನಡುವೆ ಇದೇ ಸೀರಿಯಲ್‌ನ ನಾಯಕಿ ದುರ್ಗಾಶ್ರೀ ಇದೀಗ ಹೊಸ ಸೀರಿಯಲ್‌ನಲ್ಲಿ ನಾಯಕಿಯಾಗುತ್ತಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಮುಗಿಯುತ್ತಿದ್ದಂತೆ, ಯಜಮಾನ ಮತ್ತು ವಧು ಹೆಸರಿನ ಎರಡು ಸೀರಿಯಲ್‌ಗಳ ಪ್ರಸಾರ ಆರಂಭಿಸಿತ್ತು ಕಲರ್ಸ್‌ ಕನ್ನಡ. ಇದೀಗ ಈ ಎರಡು ಧಾರಾವಾಹಿಗಳ ಪೈಕಿ ವಧು ಸೀರಿಯಲ್‌ ಶೀಘ್ರದಲ್ಲಿ ಅಂತ್ಯವಾಗಲಿದೆ ಎಂಬ ಚರ್ಚೆ ಶುರುವಾಗಿದೆ. ನಿರೀಕ್ಷಿತ ಟಿಆರ್‌ಪಿ ಪಡೆಯದ ಈ ಸೀರಿಯಲ್‌ ಅನ್ನು ಮು...