ಭಾರತ, ಜನವರಿ 31 -- Economic Survey 2025: ಕೇಂದ್ರ ಬಜೆಟ್ 2025ರ ಮಂಡನೆಗೆ ದಿನ ಮುಂಚಿತವಾಗಿ ಅಂದರೆ ಜನವರಿ 31 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ 2024-25 ಅನ್ನು ಸಂಸತ್ನಲ್ಲಿ ಮಂಡಿಸಿದರು. ಈ ಆರ್ಥಿಕ ಸಮೀಕ್ಷೆಯಲ್ಲಿ ಹಲವು ವಿಚಾರಗಳು ಪ್ರಸ್ತಾಪವಾಗಿವೆ. ಈ ಪೈಕಿ ಕೃಷಿ ಕ್ಷೇತ್ರ ವಿಶೇಷವಾಗಿ ರೈತರ ವಿಚಾರ ಪ್ರಸ್ತಾಪವಾದಾಗ ಶೇ 4 ಬಡ್ಡಿಯಲ್ಲಿ 3 ಲಕ್ಷ ರೂ ತನಕ ಸಾಲಕ್ಕೆ ಮನಸೋತ ರೈತರು ಎಂಬ ಈ ಅಂಶ ಆರ್ಥಿಕ ಸಮೀಕ್ಷೆಯಲ್ಲಿ ಎದ್ದು ಕಾಣಿಸಿತು. ಇದು ಪರಿಷ್ಕೃತ ಬಡ್ಡಿ ಸಹಾಯ ಯೋಜನೆಯ (Modified Interest Subvention Scheme- MISS) ಪರಿಣಾಮವನ್ನು ಬಿಂಬಿಸಿದೆ.
ಆರ್ಥಿಕ ಸಮೀಕ್ಷೆಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಿಂದ ಪರಿಷ್ಕೃತ ಬಡ್ಡಿ ಸಹಾಯ ಯೋಜನೆಗೆ ಸಂಬಂಧಿಸಿದ ಅರ್ಜಿಗಳ ವಿಲೆವಾರಿಯಲ್ಲಿ ತ್ವರಿತಗೊಳಿಸುವುದಕ್ಕೆ ಕಿಸಾನ್ ಋಣ ಪೋರ್ಟಲ್ (ಕೆಆರ್ಪಿ) ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ 2024ರ ಡಿ 31ರ ವೇಳೆಗೆ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಅ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.