Bengaluru, ಮೇ 19 -- ಮೈಸೂರು: ಮಾವಿನ ಹಣ್ಣಿಗಾಗಿ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಮೈಸೂರು‌ ಜಿಲ್ಲೆ ಹುಣಸೂರು ತಾಲೂಕಿನ ಒಡೆಯರ ಹೊಸಹಳ್ಳಿಯಲ್ಲಿ ಘಟನೆ ನಡೆದಿದ್ದು, ಮಲ್ಲೇಶ್ (55) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ತಮ್ಮನ ಮಗ ಚೇತನ್‌ ಕೊಲೆ ಮಾಡಿದ್ದಾನೆಂದು ಆರೋಪ ಕೇಳಿಬಂದಿದ್ದು, ಮಾವಿನ ಹಣ್ಣು ಹಂಚಿಕೆ ವಿಚಾರವಾಗಿ ಅಣ್ಣ ತಮ್ಮಂದಿರ ನಡುವೆ ಒಪ್ಪಂದ ಉಂಟಾಗಿತ್ತು.

ಸಹೋದರರಾದ ರಾಜೇಗೌಡ ಹಾಗೂ ಮಲ್ಲೇಶ್ ನಡುವೆ ಒಪ್ಪಂದವಾಗಿತ್ತು ಎಂದು ಪೊಲೀಸರು ತಿಳಿಸಿದ್ದು, ನಂತರ ಈ ಬಗ್ಗೆ ರಾಜೇಗೌಡರ ಮಗ ಚೇತನ್‌ರಿಂದ ಆಕ್ಷೇಪ ಉಂಟಾಗಿ ಗಲಾಟೆ ಉಂಟಾಗಿದೆ. ಗಲಾಟೆ ನಡುವೆ ಮಲ್ಲೇಶ್‌ಗೆ ತಮ್ಮನ ಮಗ ಚೇತನ್ ಚಾಕುವಿನಿಂದ ಇರಿದಿದ್ದಾನೆ ಎಂದು ವರದಿಯಾಗಿದೆ.

ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Published by HT Digital Content Services with permission from HT Kannada....