Bangalore, ಏಪ್ರಿಲ್ 16 -- " ಹೆಣ್ಣಲ್ಲವೇ ನಮ್ಮನ್ನೆಲ್ಲಾ ಹಡೆದ ತಾಯಿ
ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆದವಳು
ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು
ಕಾಣದ ಗಾವಿಲರು..!
ಕುವರನಾದೊಡೆ ಬಂದ ಗುಣವೇನದರಿಂದ
ಕುವರಿಯಾದೊಡೆ ಕುಂದೇನು..? "
-ಸಂಚಿ ಹೊನ್ನಮ್ಮ
ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಹದಿನೇಳನೇ ಶತಮಾನದ ಸಂಚಿ ಹೊನ್ನಮ್ಮ ಬರೆದ ಸಾಲುಗಳು ನೆನಪಿಗೆ ಬರುತ್ತಿವೆ. ಈಕೆ ಈ ಸಾಲುಗಳನ್ನು ಬರೆದು ಶತಮಾನಗಳೇ ಕಳೆದಿದ್ದರೂ, ನಮ್ಮ ಸಮಾಜ ಇಂದಿಗೂ "ಕಣ್ಣು ಕಾಣದ ಗಾವಿಲ"ರಿಂದಲೇ ತುಂಬಿ ಹೋಗಿರುವಂತೆ ಕಾಣುತ್ತಿದೆ.
ಗೃಹ ಇಲಾಖೆಯ ಅಂಕಿ-ಅಂಶ ಇದಕ್ಕೆ ಸ್ಪಷ್ಟ ನಿದರ್ಶನ. ರಾಜ್ಯದಲ್ಲಿ ಕಳೆದೆರಡು ತಿಂಗಳಲ್ಲಿ 799 ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗಿದೆ. ಗೃಹ ಇಲಾಖೆ ನೀಡುವ ಅಂಕಿ- ಅಂಶಗಳ ಪ್ರಕಾರ ಫೆಬ್ರವರಿ 20 ನೇ ತಾರೀಕಿನವರೆಗೆ ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ 799 ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಕೇವಲ 87 ಆರೋಪಿಗಳ ಬಂಧನವಾಗಿದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.