Bengaluru, ಮೇ 25 -- ಅರ್ಥ: ಐಹಿಕ ಪ್ರಕೃತಿಯಲ್ಲಿ ಜೀವಾತ್ಮನು ಹೀಗೆ ತ್ರಿಗುಣಗಳನ್ನು ಅನುಭವಿಸುತ್ತ ಬದುಕಿನ ರೀತಿಗಳನ್ನು ಅನುಸರಿಸುತ್ತಾನೆ. ಇದಕ್ಕೆ ಐಹಿಕ ಪ್ರಕೃತಿಯೊಡನೆ ಅವನ ಸಹಯೋಗವೇ ಕಾರಣ. ಹೀಗೆ ಆತನು ವಿವಿಧ ಜೀವಿ ವರ್ಗಗಳಲ್ಲಿ ಒಳ್ಳೆಯದನ್ನು ಕೆಟ್ಟದ್ದನ್ನು ಅನುಭವಿಸುತ್ತಾನೆ.

ಭಾವಾರ್ಥ: ಜೀವಾತ್ಮ ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಹೇಗೆ ಸಾಗುತ್ತಾನೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಈ ಶ್ಲೋಕವು ಬಹು ಮುಖ್ಯವಾದದ್ದು. ಮನುಷ್ಯನು ಉಡುಪನ್ನು ಬದಲಾಯಿಸುವ ಹಾಗೆ ಜೀವಿಯು ದೇಹದಿಂದ ದೇಹಕ್ಕೆ ಸಾಗುತ್ತಾನೆ. ಇದನ್ನು ಎರಡನೆಯ ಅಧ್ಯಾಯದಲ್ಲಿ ಹೇಳಿದೆ. ಉಡುಪಿನ ಈ ಬದಲಾವಣೆಗೆ ಐಹಿಕ ಅಸ್ತಿತ್ವದಲ್ಲಿ ಅವನಿಗಿರುವ ಆಸಕ್ತಿಯೇ ಕಾರಣ. ಈ ಮಾಯಾ ಅಭಿವ್ಯಕ್ತಿಯು ಅವನನ್ನು ಮೋಹಗೊಳಿಸಿದಷ್ಟು ಕಾಲವೂ ಅವನು ದೇಹದಿಂದ ದೇಹಕ್ಕೆ ಸಾಗುತ್ತಲೇ ಇರಬೇಕಾಗುತ್ತದೆ. ಐಹಿಕ ಪ್ರಕೃತಿಯ ಮೇಲೆ ಪ್ರಭುತ್ವ ನಡೆಸಬೇಕೆಂಬ ಅವನ ಆಸೆಯಿಂದ ಅವನು ಇಂತಹ ಅಪೇಕ್ಷಣೀಯವಲ್ಲದ ಸನ್ನಿವೇಶಗಳಲ್ಲಿ ಇರಿಸಲ್ಪಡುತ್ತಾನೆ.

ಜೀವಿಯು ಒಮ್ಮೆ ದೇವತೆಯಾಗಿ...