ಭಾರತ, ಏಪ್ರಿಲ್ 29 -- ಜಮ್ಮು- ಕಾಶ್ಮೀರದ ಪಹಲ್ಗಾಮ್‌ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಕ್ಕಟ್ಟು ಹೆಚ್ಚಾಗಿದೆ. ಈ ನಡುವೆ, ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂಬ ಒತ್ತಡ ಭಾರತ ಸರ್ಕಾರದ ಮೇಲೆ ಹೆಚ್ಚಾಗಿದೆ. ಬಹುತೇಕ ಎಲ್ಲ ಭಾರತೀಯರೂ ಅದನ್ನೇ ಬಯಸುತ್ತಿದ್ದು, ಸೋಷಿಯಲ್ ಮೀಡಿಯಾಗಳಲ್ಲೂ ಈ ಬಗ್ಗೆಯೇ ಕಾಮೆಂಟ್ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತ ರಾಜೀವ ಹೆಗಡೆ ಅವರು, ಪಾಕಿಸ್ತಾನಕ್ಕೆ ಈ ಬಾರಿ ಬುದ್ಧಿ ಕಲಿಸಲೇಬೇಕೆಂದು ನನ್ನನ್ನು ಸೇರಿಸಿ, ಬಹುತೇಕ ಭಾರತೀಯರು ಬಯಸುತ್ತಿದ್ದಾರೆ. ಯುದ್ಧೋನ್ಮಾದದ ಮಧ್ಯೆ ವಾಸ್ತವವನ್ನು ಮರೆಯದಿರೋಣ! ಎಂದು ಎಚ್ಚರಿಸಿದ್ದಾರೆ. ಅವರ ಬರಹದ ಪೂರ್ಣಪಾಠ ಇಲ್ಲಿದೆ.

ಕಳೆದ ನಾಲ್ಕೈದು ದಿನದಿಂದ ಭಾರತದೆಲ್ಲೆಡೆ ದೇಶಾಭಿಮಾನ, ಆಕ್ರೋಶದ ಜತೆಗೆ ಯುದ್ಧೋನ್ಮಾದವು ತಾರಕಕ್ಕೇರಿದೆ. ಪಾಕಿಸ್ತಾನಕ್ಕೆ ಈ ಬಾರಿ ಬುದ್ಧಿ ಕಲಿಸಲೇಬೇಕೆಂದು ನನ್ನನ್ನು ಸೇರಿಸಿ, ಬಹುತೇಕ ಭಾರತೀಯರು ಬಯಸುತ್ತಿದ್ದಾರೆ. ನಮ್ಮ ಮಾಧ್ಯಮಗಳಂತು ಈಗಾಗಲೇ ಕರಾಚಿ ಆಸುಪಾಸಿನಲ್ಲಿ ಎಷ್ಟು ಬಾಂಬ್‌ ಬೀ...