Bengaluru, ಮೇ 22 -- ಅರ್ಥ: ಪ್ರಕೃತಿಯನ್ನೂ ಜೀವಿಯನ್ನೂ ಮತ್ತು ಗುಣಗಳ ಪರಸ್ಪರ ಪ್ರಕ್ರಿಯೆಯನ್ನೂ ಕುರಿತ ಈ ತತ್ವಜ್ಞಾನವನ್ನು ಅರ್ಥಮಾಡಿಕೊಂಡವನು ಮುಕ್ತಿಯನ್ನು ಪಡೆಯುವುದು ನಿಶ್ಚಯ. ಅವನ ಪ್ರಸ್ತುತ ಸ್ಥಿತಿ ಏನೇ ಆಗಿರಲಿ, ಅವನು ಇಲ್ಲಿ ಮತ್ತೆ ಹುಟ್ಟುವುದಿಲ್ಲ.
ಭಾವಾರ್ಥ: ಐಹಿಕ ಪ್ರಕೃತಿ, ಪರಮಾತ್ಮ, ಜೀವಿ ಮತ್ತು ಅವರ ಪರಸ್ಪರ ಪ್ರತಿಕ್ರಿಯೆ ಇವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇದರಿಂದ ಮನುಷ್ಯನು ಮತ್ತೆ ಈ ಐಹಿಕ ಪ್ರಕೃತಿಗೆ ಹಿಂದಿರುಗುವ ಒತ್ತಾಯವಿಲ್ಲದೆ ಮುಕ್ತನಾಗುವುದಕ್ಕೆ ಆಧ್ಯಾತ್ಮಿಕ ವಾತಾವರಣಕ್ಕೆ ತಿರುಗಲು ಅರ್ಹನಾಗುತ್ತಾನೆ. ಇದು ಜ್ಞಾನದ ಫಲ. ಜೀವಿಯು ಅಕಸ್ಮಾತ್ತಾಗಿ ಈ ಐಹಿಕ ಅಸ್ತಿತ್ವದಲ್ಲಿ ಬಿದ್ದು ಬಿಟ್ಟಿದ್ದಾನೆ ಎನ್ನುವುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಜ್ಞಾನದ ಉದ್ದೇಶ. ಅಧಿಕಾರಿಗಳು, ಸಂತಸದೃಶ ಜನರು ಮತ್ತು ಗುರು ಇವರ ಸಹವಾಸದಲ್ಲಿ ಮನುಷ್ಯನು ತಾನೇ ಪ್ರಯತ್ನಿಸಿ ತನ್ನ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು; ಅನಂತರ ದೇವೋತ್ತಮ ಪುರುಷನು ವಿವರಿಸಿದಂತೆ ಭಗವದ್ಗೀತೆಯನ್ನು ಅರ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.