ಭಾರತ, ಏಪ್ರಿಲ್ 13 -- 2022ರ ನಂತರ ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯವನ್ನಾಡಿದ ಕನ್ನಡಿಗ ಕರುಣ್ ನಾಯರ್ ತನಗೆ ಅವಕಾಶ ಸಿಕ್ಕ ಮೊದಲ ಪಂದ್ಯದಲ್ಲೇ ಅಬ್ಬರಿಸಿ ಬೊಬ್ಬಿರಿದರು. ಆದರೆ ಅವರ ಆರ್ಭಟದ ಹೊರತಾಗಿಯೂ ಗೆಲುವು ಕರುಣೆ ತೋರಲಿಲ್ಲ. ಪ್ರಸಕ್ತ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸೋಲಿನ ರುಚಿ ಕಂಡಿದೆ. ದೇಶೀಯ ಕ್ರಿಕೆಟ್ನ ಕಳೆದ ಸೀಸನ್ ಎಲ್ಲಾ ಸ್ವರೂಪದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕರುಣ್ ಭರ್ಜರಿ ಅರ್ಧಶತಕದ (89) ಸಹಾಯದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಸನಿಹಕ್ಕೆ ಬಂದು 12 ರನ್ನಿಂದ ಪರಾಭವಗೊಂಡಿದೆ. 19ನೇ ಓವರ್ನಲ್ಲಿ ನಡೆದ ಹೈಡ್ರಾಮಾದಲ್ಲಿ ಹ್ಯಾಟ್ರಿಕ್ ರನೌಟ್ ಮಾಡಿದ ಮುಂಬೈ ರೋಚಕ ಗೆಲುವಿಗೆ ಸಾಕ್ಷಿಯಾಯಿತು.
19ನೇ ಓವರ್ನ 4, 5, 6ನೇ ಎಸೆತಗಳಲ್ಲಿ ಕ್ರಮವಾಗಿ ಅಶುತೋಷ್ ಶರ್ಮಾ, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ ರನೌಟ್ ಆದರು. ಗೆಲ್ಲಲು 15 ರನ್ ಬೇಕಿದ್ದಾಗ ಈ ಮೂರು ರನೌಟ್ಗಳು ಆಗಿದ್ದು, ಪಂದ್ಯದ ಚಿತ್ರಣವನ್ನೇ ಬದಲಿಸಿತು. ಇದಕ್ಕೂ ಮುನ್ನ ಕರುಣ್ ಶರ್ಮಾ ಪ್ರಮುಖ ವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.