ಭಾರತ, ಮೇ 5 -- ಎಸ್‌ಎಸ್‌ಎಲ್‌ಸಿ ಫಲಿತಾಂಶ: ಕಳೆದ ಮೂರು ದಿನಗಳಿಂದ ಬಾಗಲಕೋಟೆ ನವನಗರದ ವಿದ್ಯಾರ್ಥಿಯೊಬ್ಬ 6ಕ್ಕೆ 6 ವಿಷಯದಲ್ಲಿ ಫೇಲ್ ಆಗಿದ್ದರೂ ಅಪ್ಪ, ಅಮ್ಮ ಆತನಿಗೆ ಕೇಕ್ ತಿನ್ನಿಸಿ, ಪ್ರಯತ್ನ ಕೈಬಿಡಬೇಡ, ಮತ್ತೆ ಪರೀಕ್ಷೆ ಬರೆದು ಪಾಸ್ ಆಗು ಎಂದು ಧೈರ್ಯ ತುಂಬಿದ ವಿಚಾರ ವೈರಲ್‌ ಆಗಿದೆ. ಭಾರತದ ಉದ್ದಗಲಕ್ಕೂ ಇದು ಚರ್ಚೆಗೆ ಗ್ರಾಸವಾಗಿದೆ. ಅಪ್ಪ-ಅಮ್ಮನ ನಡೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು, ಎಲ್ಲರ ಗಮನವೂ ಅವರತ್ತ ನೆಟ್ಟಿದೆ. ಬಾಲಕನ ಹೆಸರು ಅಭಿಷೇಕ್. ಈತ ಬಾಗಲಕೋಟೆಯ ಛಾಯಾಗ್ರಾಹಕ ಯಲ್ಲಪ್ಪ ಚೊಳಚಗುಡ್ಡ ಅವರ ಪುತ್ರ. ಬಾಗಲಕೋಟೆಯ ಬಸವೇಶ್ವರ ಹೈಸ್ಕೂಲ್‌ನಲ್ಲಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿ.

ಅಭಿಷೇಕ್ ಈ ವಿದ್ಯಮಾನದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡುತ್ತ, "ಎಸ್‌ಎಸ್‌ಎಲ್‌ಸಿ ಫೇಲ್ ಆಗಿರಬಹುದು, ಸೋಲಬೇಡ ಎಂದು ಕೇಕ್ ತಿನ್ನಿಸಿದರು ಅಪ್ಪ, ಅಮ್ಮ" ಎಂದು ಹೇಳಿದ್ದ. ಈ ಮಾತುಗಳು ನಿಜಕ್ಕೂ ಅಭಿಷೇಕ್ ಆತ್ಮವಿಶ್ವಾಸದ ಹಿಂದೆ ನೋವಿದೆ, ಹೋರಾಟವೂ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಈ ಸುದ್ದಿ ನೋಡಿದ ಕೆಲವರಿಗಾದ...