Bengaluru, ಮೇ 16 -- ʻಮುಸ್ಸಂಜೆ ಮಾತುʼ.. 2008ರ ಮೇ 16ರಂದು ತೆರೆಗೆ ಬಂದ ಸಿನಿಮಾ. ಕಿಚ್ಚ ಸುದೀಪ್‌ ಮತ್ತು ರಮ್ಯಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾವನ್ನು ಮುಸ್ಸಂಜೆ ಮಹೇಶ್‌ ನಿರ್ದೇಶನ ಮಾಡಿದ್ದರು. ಸುರೇಶ್‌ ಜೈನ್‌ ನಿರ್ಮಾಣ ಮಾಡಿದ್ದ ಈ ಸಿನಿಮಾ ಆಗಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಹಾಡುಗಳು ಪ್ರತಿ ಮನೆಮನಗಳನ್ನೂ ತಲುಪಿದ್ದವು. ಆಡಿಯೋ ಸಿಡಿಗಳು ಭರಪೂರ್‌ ಸೇಲ್‌ ಆಗಿದ್ದವು. ಇದೀಗ ಇದೇ ಸಿನಿಮಾ ತೆರೆಕಂಡು ಇಂದಿಗೆ (ಮೇ 16) 17 ವರ್ಷ ಪೂರೈಸಿದೆ. ಈ ವಿಶೇಷ ಕ್ಷಣದ ಬಗ್ಗೆ ನಟ ಕಿಚ್ಚ ಸುದೀಪ್‌ ವಿಡಿಯೋವೊಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ.

"ಮೊನ್ನೆ ಮೊನ್ನೆ ಮಾಡಿದ ಹಾಗೆ ಇದೆ ಈ ಸಿನಿಮಾನ. ಎಲ್ಲರಿಗೂ ಈ ಮೂಲಕ ಧನ್ಯವಾದ ಹೇಳಲು ಬಯಸುತ್ತೇನೆ. ಸಿನಿಮಾನ ಇನ್ನೂ ನೆನಪಿನಲ್ಲಿ ಇಟ್ಟುಕೊಂಡಿರುವುದಕ್ಕೆ, ʻಏನಾಗಲಿ ಮುಂದೆ ಸಾಗು ನೀʼ ಹಾಡನ್ನು ಇನ್ನೂ ಜೀವಂತವಾಗಿಟ್ಟಿರುವುದಕ್ಕೆ. ಆ ಹಾಡನ್ನು ಕೊಟ್ಟ ನಮ್ಮ ಮ್ಯೂಸಿಕ್‌ ಡೈರೆಕ್ಟರ್‌, ನಮ್ಮ ಡೈರೆಕ್ಟರ್‌ ಮತ್ತು ಪ್ರೊಡ್...