ಭಾರತ, ಮಾರ್ಚ್ 3 -- ಪರಿಸರ ನಾಶ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವನ್ಯಜೀವಿಗಳ ಬದುಕು ದುಸ್ತರವಾಗಿದೆ. ಕಾಡುಪ್ರಾಣಿಗಳ ಅವಾಸಸ್ಥಾನಕ್ಕೆ ಕುತ್ತು ಬಂದಿರುವ ಕಾರಣ ಅವು ಪಟ್ಟಣಗಳಲ್ಲೂ ಕಾಣಿಸಿಕೊಳ್ಳುವಂತಾಗಿದೆ. ಕಾಡುಗಳನ್ನೆಲ್ಲಾ ಕಡಿದು ಮನುಷ್ಯ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಕಾಡುಪ್ರಾಣಿಗಳಿಗೆ ವಾಸಿಸಲು ನೆಲೆ ಸಿಗುವುದು ಕಷ್ಟವಾಗಿದೆ. ಅಲ್ಲದೇ ಕಾಡುಪ್ರಾಣಿಗಳ ಅಕ್ರಮ ಸಾಗಾಟವೂ ಎಗ್ಗಿಲ್ಲದೇ ನಡೆಯುತ್ತಿದೆ. ಇದರೊಂದಿಗೆ ಹಲವಾರು ಸಸ್ಯ ಸಂಕುಲಗಳು ಅಳವಿನಂಚಿನಲ್ಲಿದೆ. ಇದು ಪರಿಸರ ವ್ಯವಸ್ಥೆಯ ವಿನಾಶವನ್ನು ಎತ್ತಿ ತೋರಿಸುವಂತಿದೆ. ಈ ಸಂದರ್ಭದಲ್ಲಿ ಕಾಡುಪ್ರಾಣಿಗಳ ಬಗ್ಗೆ ಹಾಗೂ ಸಸ್ಯ ಸಂಕುಲಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್ 3 ರಂದು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತಿದೆ.
1973ರಲ್ಲಿ ಸಹಿ ಹಾಕಿದ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಪ್ರಭೇದ ಮತ್ತು ಸಸ್ಯಗಳ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶದ (CITES) ವಾರ್ಷಿಕೋತ್ಸವವನ್ನು ಗುರುತಿಸುವ ಉದ್ದೇ...
Click here to read full article from source
To read the full article or to get the complete feed from this publication, please
Contact Us.