Bengaluru, ಮಾರ್ಚ್ 30 -- Vishwavas Samvatsara: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬಂದಿದೆ. ಇಂದು (ಮಾರ್ಚ್ 30, ಭಾನುವಾರ) ಎಲ್ಲೆಡೆ ಸಂಭ್ರಮ, ಸಡಗರದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದು ಹಿಂದೂಗಳ ಹೊಸ ವರ್ಷದ ಮೊದಲ ಹಬ್ಬವಾಗಿದೆ. ಇಂದಿನಿಂದ ಶ್ರೀ ವಿಶ್ವವಸು ನಾಮ ಸಂವತ್ಸರ ಆರಂಭವಾಗಲಿದೆ. ಈ ಬಾರಿ ಹೊಸ ವರ್ಷದ ಹೆಸರು ವಿಶ್ವವಸು ನಾಮ ಸಂವತ್ಸರ. ಕ್ರೋಧಿನಾಮ ಸಂವತ್ಸರ ಪೂರ್ಣಗೊಂಡ ನಂತರ ವಿಶ್ವವಸು ಸಂವತ್ಸರವನ್ನು ಪ್ರವೇಶಿಸಿದ್ದೇವೆ. ಈ ವಿಶ್ವಾವಸು ಹೆಸರಿನ ಬಗ್ಗೆ ತಿಳಿದುಕೊಂಡಿರುವವರ ಸಂಖ್ಯೆ ತುಂಬಾ ಕಡಿಮೆ. ವಿಶ್ವವಸು ಯಾರು? ಹೆಸರಿನ ಹಿಂದಿನ ಕಥೆ ಏನು ಎಂದು ತಿಳಿಯೋಣ.

ವಿಶ್ವವಸು ಎಂಬುದು ಸಂಗೀತಗಾರನೆಂದು ಹೇಳಲಾಗುವ ಗಂಧರ್ವನ ಹೆಸರು. ಈ ವಿಶ್ವವಸು ಕಬಂಧ ಎಂದೂ ಕರೆಯುತ್ತಾರೆ. ಕಬಂಧ ಎಂಬುದು ರಾಕ್ಷಸನ ಹೆಸರು. ಗಂಧರ್ವನಾಗಿದ್ದ ವಿಶ್ವವಸು ಶಾಪದಿಂದ ಕಬಂಧನಾದನು. ರಾಮಾಯಣದಲ್ಲಿ ಕಬಂಧನನ್ನು ಉಲ್ಲೇಖಿಸಲಾಗಿದೆ.

ಇದು ಮೊದಲ ಗಂಧರ್ವ ಎಂದು ಹೇಳಲಾಗುವ ವಿಶ್ವವಸುವಿನ ಕಥೆ. ಗಂಧರ್ವರು ಉತ್ತಮ ...