Vijayapura, ಏಪ್ರಿಲ್ 13 -- ಮುಗಿಲು ಮುಟ್ಟಿದ ಹರ್ಷೋದ್ಗಾರ, ಎಲ್ಲಿ ನೋಡಿದರೂ ಜನಸಾಗರ, ಹಣ್ಣು ಸಮಪಿ೯ಸಿ ಭಕ್ತಿ ಮೆರೆದ ಭಕ್ತರ ನಡುವೆ ವಿಜಯಪುರ ಜಿಲ್ಲೆಯ ಗೊಲ್ಲಾಳೇಶ್ವರ ರಥೋತ್ಸವ ಜರುಗಿತು,
ಸಿಂದಗಿ ತಾಲೂಕಿನ ಸುಕ್ಷೇತ್ರ ಗೋಲಗೇರಿಯ ಗೊಲ್ಲಾಳೇಶ್ವರ ರಥೋತ್ಸವ ಶನಿವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮುಕ್ತಾಯಗೊಂಡಿತು.
ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳ ಭಕ್ತರು ಪಾದಯಾತ್ರೆ ಮೂಲಕ ನಸುಕಿನಲ್ಲೇ ಕ್ಷೇತ್ರಕ್ಕೆ ಆಗಮಿಸಿದರು. ಸೂರ್ಯೋದಯ ಸಂದರ್ಭದಲ್ಲಿ ಸಾವಿರಾರು ಭಕ್ತರು ದೀಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರೆ, ರಥ ಎಳೆಯುವಾಗ ಮನೆ ಮೇಲೇರಿ ಭಕ್ತರು ಗೊಲ್ಲಾಳೇಶ್ವರನಿಗೆ ಕೈ ಮುಗಿದರು,.
ದೇವಸ್ಥಾನದಿಂದ ಪಾದಗಟ್ಟೆವರೆಗೆ ರಥ ಸಾಗುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಭಕ್ತರು ಉತ್ತತ್ತಿ, ಹಣ್ಣು, ಕಾಯಿ ಕರ್ಪೂರ ಸಮರ್ಪಿಸಿದರು. ಆಂಧ್ರ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಯಿಂದ ಉತ್ಸವಕ್ಕೆ ಭಕ್ತಸಾಗರವೇ ಹರಿದುಬಂದಿತ್ತು.
ಧರ್ಮದರ್ಶಿ...
Click here to read full article from source
To read the full article or to get the complete feed from this publication, please
Contact Us.