Vijayapura, ಜನವರಿ 28 -- ವಿಜಯಪುರ: ಹುಬ್ಬಳ್ಳಿಗಿಂತಲೂ ಮೊದಲೇ ಭೂಸ್ವಾಧೀನಗೊಂಡು ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಿಳಂಬವಾಗುತ್ತಲೇ ಬಂದರೂ ಈಗ ಬಹುತೇಕ ಕಾಮಗಾರಿ ಮುಕ್ತಾಯಗೊಂಡಿದೆ.ಸತತ ಆರು ವರ್ಷಗಳ ಕಾಲ ನಿರಂತರ ಕಾಮಗಾರಿ ನಡೆದು ಉದ್ಘಾಟನೆಗೆ ಸಿದ್ದಗೊಂಡಿದೆ. ಈ ಹಿಂದೆ ಸಚಿವರಾಗಿದ್ದ ಗೋವಿಂದಕಾರಜೋಳ, ಎಂ.ಸಿ.ಮನಗೂಳಿ ಅವರ ನಂತರ ಹಾಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸತತ ಪ್ರಯತ್ನದ ಫಲವಾಗಿ ವಿಮಾನ ನಿಲ್ದಾಣ ಉದ್ಘಾಟನೆಗೆ ಅಣಿಯಾಗಿದೆ.ಸದ್ಯಕ್ಕೆ, ಕೇಂದ್ರ ಪರಿಸರ ಇಲಾಖೆಯ ಅನುಮತಿಗಳು ಮಾತ್ರ ಬಾಕಿ ಉಳಿದಿದ್ದು, ಇದು ಒಂದೆರಡು ತಿಂಗಳಲ್ಲಿ ದೊರೆಯುವ ನಿರೀಕ್ಷೆ ಇದೆ. ಈ ಪ್ರಕ್ರಿಯೆ ಮುಗಿದ ಕೂಡಲೇ ಇಲ್ಲಿನ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ವಿಜಯಪುರದಿಂದ ಸಿಂದಗಿಗೆ ಹೋಗುವ ಮಾರ್ಗದಲ್ಲಿನ ಹೊರ ವಲಯದ ಬುರಣಾಪೂರ ಮತ್ತು ಮದಭಾವಿ ಗ್ರಾಮ ವ್ಯಾಪ್ತಿಯ 727 ಎಕರೆ ಜಾಗದಲ್ಲಿ 348 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಏರ್‍ಬಸ್-320 ವಿಮಾನಗಳ ಹಗಲು ಹಾರಾಟಕ್ಕಾಗಿ ಅಗತ್ಯ ಕ...