ಭಾರತ, ಏಪ್ರಿಲ್ 11 -- Tahawwur Rana: ಭಾರತದಲ್ಲಿ 2008ರ 26/11 ಮುಂಬಯಿ ದಾಳಿಯ ಸಂಚುಕೋರರ ಪೈಕಿ ಒಬ್ಬನಾದ ತಹವ್ವುರ್ ರಾಣಾನನ್ನು ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ) ತಂಡ ಗುರುವಾರ ರಾತ್ರಿ ವೇಳೆಗೆ ಭಾರತಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಮಾಡಿದೆ. ಕೋರ್ಟ್ ರಾಣಾನನ್ನು 18 ದಿನ ಎನ್ಐಎ ಕಸ್ಟಡಿಗೊಪ್ಪಿಸಿದೆ. ಈ ಸಂದರ್ಭದಲ್ಲಿ ಮುಂಬಯಿ ದಾಳಿಗೆ ಸಂಬಂಧಿಸಿದ ಆತನ ವಿಚಾರಣೆಯನ್ನು ಎನ್ಐಎ ಅಧಿಕಾರಿಗಳ ತಂಡ ನಡೆಸಲಿದೆ ಎಂದು ಏಜೆನ್ಸಿ ಮೂಲಗಳು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ತಹವ್ವುರ್ ರಾಣಾನನ್ನು ಕೋರ್ಟ್ಗೆ ಹಾಜರುಪಡಿಸಿದ ಎನ್ಐಎ, ಆತನನ್ನು 20 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿತು. 2008ರ ಮುಂಬಯಿ ದಾಳಿಗೆ ಸಂಬಂಧಿಸಿ ವಿಚಾರಣೆ ನಡೆಸುವುದಕ್ಕೆ ಅಷ್ಟು ದಿನಗಳ ಕಾಲಾವಕಾಶ ಬೇಕು ಎಂದು ವಾದಿಸಿತು. ನ್ಯಾಯಾಲಯದಲ್ಲಿ ತಡರಾತ್ರಿವರೆಗೂ ವಾದ-ಪ್ರತಿವಾದ ಮುಂದುವರಿದು ಕೊನೆಗೆ, ರಾಣಾನನ್ನು 18 ದಿನ ಎನ್ಐಎ ಕಸ್ಟಡಿಗೊಪ್ಪಿಸಲು ನ್ಯಾಯಪೀಠ ತೀರ್ಮಾನಿಸಿತು ಎಂದು ವರದಿ ಹೇಳಿದೆ.
...
Click here to read full article from source
To read the full article or to get the complete feed from this publication, please
Contact Us.