ಭಾರತ, ಏಪ್ರಿಲ್ 30 -- ಬಿಳಿಗಿರಿರಂಗನಬೆಟ್ಟ:

ಚಾಮರಾಜನಗರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಬಿಳಿಗಿರಿರಂಗನ ಬೆಟ್ಟ.ಬಿಆರ್ ಹಿಲ್ಸ್ ಎಂದು ಕರೆಯಲ್ಪಡುವ ಬಿಳಿಗಿರಿರಂಗನ ಬೆಟ್ಟಗಳು ಆಗ್ನೇಯ ಕರ್ನಾಟಕದಲ್ಲಿ ತಮಿಳುನಾಡಿನ ಈರೋಡ್ ಜಿಲ್ಲೆಯ ಗಡಿಯಲ್ಲಿರುವ ದಕ್ಷಿಣ ಪರ್ವತದ ಒಂದು ಬೆಟ್ಟ ಪ್ರದೇಶವಾಗಿದೆ ಈ ಪ್ರದೇಶವನ್ನು ಬಿಳಿಗಿರಂಗನಾಥ ಸ್ವಾಮಿ ದೇವಾಲಯ ವನ್ಯಜೀವಿ ಧಾಮ ಎಂದು ಕರೆಯಲಾಗುತ್ತದೆ. ಇಲ್ಲಿ ಬಿಳಿಗಿರಿ ರಂಗನಾಥ ಸ್ವಾಮಿ ದೇಗುಲ, ಬೆಟ್ಟ ಸಾಲುಗಳು, ವನ್ಯಜೀವಿ ಸಫಾರಿಗೆ ಅವಕಾಶವಿದೆ

ಆಲಮಟ್ಟಿ ಲವಕುಶ ಉದ್ಯಾನ

ಉತ್ತರ ಕರ್ನಾಟಕದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಆಲಮಟ್ಟಿ ಜಲಾಶಯದ ಪ್ರವಾಸಿ ತಾಣಗಳು ಹಲವು. ಇದರಲ್ಲಿ ಲವಕುಶ ಉದ್ಯಾನ ರಾಮಾಯಾಣದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಕಲಾವಿದರು ಇಲ್ಲಿ ರಾಮಾಯಣದ ಸನ್ನಿವೇಶಗಳನ್ನು ಅದ್ಭುತವಾಗಿಯೇ ಮೂಡಿಸಿದ್ದಾರೆ. ಆಲಮಟ್ಟಿ ಹಿನ್ನೀರಿನ ನಡುವೆ ಇದನ್ನು ನೋಡುವುದೇ ಚೆಂದ.

ಬೆಂಗಳೂರು ನಂದಿಬೆಟ್ಟ:

ನಂದಿ ಬೆಟ್ಟ ರಾಜ್ಯ ರಾಜಧಾನಿ ಬೆಂಗಳೂರಿನ ಹತ್ತಿ...