ಭಾರತ, ಮಾರ್ಚ್ 30 -- Ramadan 2025: ಬೆಂಗಳೂರು ಮಹಾನಗರ ವ್ಯಾಪ್ತಿಯ ವಿವಿಧೆಡೆ ನಾಳೆ (ಮಾರ್ಚ್ 31) ರಂಜಾನ್ ಪ್ರಾರ್ಥನೆಗಳು ನಡೆಯುವ ಕಾರಣ, ಸುಗಮ ಸಂಚಾರಕ್ಕಾಗಿ ಸಂಚಾರ ಪೊಲೀಸರು ಕೆಲವು ಸಂಚಾರ ವ್ಯತ್ಯಯಗಳನ್ನು ಪ್ರಕಟಿಸಿದ್ದಾರೆ. ಚಾಮರಾಜಪೇಟೆ, ಗುರಪ್ಪನಪಾಳ್ಯ ಸೇರಿ ವಿವಿಧೆಡೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಸಂಚಾರ ವ್ಯತ್ಯಯವಾಗಲಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ 1ನೇ ಮುಖ್ಯರಸ್ತೆಯ ಬಿಬಿಎಂಪಿ ಆಟದ ಮೈದಾನ ಹಾಗೂ ಬಿಬಿ ಜಂಕ್ಷನ್‌ನಲ್ಲಿ ರಂಜಾನ್ ಪ್ರಾರ್ಥನೆ ನಡೆಯುವ ಕಾರಣ, ಮೈಸೂರುರಸ್ತೆಯ BGS ಪ್ಲೈಓವರ್ ರನ್ನು ಬೆಳಿಗ್ಗೆ 8:00 ಗಂಟೆಯಿಂದ ಪ್ರಾರ್ಥನೆ ಮುಗಿಯುವವರೆಗೆ ತಾತ್ಕಾಲಿಕವಾಗಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಚಾಮರಾಜಪೇಟೆ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ. ಬದಲಿ ರಸ್ತೆಯ ನಕ್ಷೆಯನ್ನೂ ಪ್ರಕಟಿಸಿದ್ದಾರೆ.

ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಗುರಪ್ಪನಪಾಳ್ಯ ಸಮೀಪ ರಂಜಾನ್ ಪ್ರಾರ್ಥನೆ ನಡೆಯಲಿರುವ ಕಾರಣ ಮಾರ್ಚ್‌ 31 ರಂ...