ಭಾರತ, ಮಾರ್ಚ್ 13 -- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ತಾನೇ ವೈಶಾಖಾಳಿಗೆ ಬುದ್ದಿ ಕಲಿಸಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತಿದ್ದಾಳೆ.

ಈ ಹಿಂದೆ ಚಾರು ಮುಡಿ ಕೊಡುವಂತೆ ಮಾಡಿದ್ದ ವೈಶಾಖಾಳಿಗೆ, ಈಗ ಚಾರು ಅದೇ ಸಂದರ್ಭವನ್ನು ಮತ್ತೆ ಎದುರಿಗಿಟ್ಟಿದ್ಧಾಳೆ.

ವೈಶಾಖಾ ಮತ್ತು ಚಾರು ನಡುವಿನ ಕಲಹವನ್ನು ನೋಡಿ ರುಕ್ಕು ಕಂಗಾಲಾಗಿ ನಿಂತಿದ್ದಾಳೆ. ವೈಶಾಖಾಳ ತಪ್ಪು ರುಕ್ಕುಗು ಗೊತ್ತಿದೆ.

ಚಾರು ದೊಡ್ಡ ಮನಸು ಮಾಡಿ ವೈಶಾಖಾ ಮುಡಿ ಕೊಡುವುದು ಬೇಡ ಎನ್ನುತ್ತಾಳೆ. ನನಗಾದ ಪರಿಸ್ಥಿತಿ ನಿನಗಾಗುವುದು ಬೇಡ ಅಕ್ಕ ಎನ್ನುತ್ತಾಳೆ.

"ನಾನು ನಿನ್ನ ಮನಸಿನಲ್ಲಿರುವ ವಿಷ ತೆಗೆಯುವ ಪ್ರಯತ್ನ ಮಾಡ್ದೆ. ನಿನ್ನ ದೇಹಕ್ಕೆ ಯಾವ ವಿಷ ಕೂಡ ಅಂಟಿಕೊಂಡಿಲ್ಲ" ಎಂದು ಚಾರು ಹೇಳುತ್ತಾಳೆ.

ಚಾರು ಆಡಿದ ಆ ಮಾತನ್ನು ಕೇಳಿ ವೈಶಾಖಾಳಿಗೆ ತುಂಬಾ ಖುಷಿಯಾಗುತ್ತದೆ. ಆದರೆ, ವೈಶಾಖಾ, ಚಾರು ಯಾಕೆ ನಾಟಕ ಮಾಡಿದ್ದು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾಳೆ.

ಆಗ ಚಾರು ಹೇಳುತ್ತಾಳೆ "ನೀನು ಜೈಲಿನಿಂದ ಬಂದರೂ ಬದಲಾಗಿ...