ಭಾರತ, ಮಾರ್ಚ್ 16 -- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ರಂಗೋಲಿ ಹಾಕುತ್ತಾ ಇರುತ್ತಾಳೆ. ಆಗ ಅಲ್ಲಿಗೆ ರಾಮಾಚಾರಿ ಬಂದು ಕುಳಿತುಕೊಳ್ಳುತ್ತಾನೆ.

ಅಲ್ಲೇ ಇದ್ದ ಮುರಾರಿ ಕೂಡ ಬಂದು ರಾಮಾಚಾರಿ ಪಕ್ಕ ಕುಳಿತುಕೊಳ್ಳುತ್ತಾನೆ. ಆಗ ರಾಮಾಚಾರಿ ಮಾತಾಡಲು ಆರಂಭಿಸುತ್ತಾನೆ.

ಚಾರು, ರಾಮಾಚಾರಿ ಮಾತು ಕೇಳಿ ರಂಗೋಲಿಯಲ್ಲಿ ಬದುಕಿನ ಸಾರವೇ ಅಡಗಿದೆ ಎಂದು ಹೇಳುತ್ತಾಳೆ. ಆ ರಾಮಾಚಾರಿ ವಿವರಿಸುತ್ತಾ ಹೋಗುತ್ತಾನೆ.

ಬದುಕು ಅನ್ನೋದು ಈ ರಂಗೋಲಿ ಇದ್ದಂತೆ. ಚುಕ್ಕಿಗಳೆಲ್ಲ ಕುಟುಂಬದ ಒಬ್ಬೊಬ್ಬ ಸದಸ್ಯರಿದ್ದಂತೆ ಎಂದು ರಾಮಾಚಾರಿ ಹೇಳುತ್ತಾನೆ. ಒಂದೊಂದೇ ಚುಕ್ಕಿ ತೋರಿಸುತ್ತಾ ಅದಕ್ಕೆ ಹೆಸರಿಡುತ್ತಾನೆ.

ಮನೆ ಮುಂದೆ ರಂಗೋಲಿ ನೋಡಿ ಭಿಕ್ಷುಕರು ಕೂಡ ಈ ಮನೆಯಲ್ಲಿ ಭಿಕ್ಷೆ ಸಿಗುತ್ತಾ ಇಲ್ವಾ ಅಂತ ಗುರುತು ಹಿಡಿತಾರಂತೆ ಎಂದು ಚಾರು ಹೇಳುತ್ತಾಳೆ.

ಸಮಾನಾಂತರ ರೇಖೆಯಲ್ಲಿದ್ರು ಒಂದು ಚುಕ್ಕಿಗೆ ಇನ್ನೊಂದು ಚುಕ್ಕಿ ಸೇರೋದಿಲ್ಲ. ಅದನ್ನು ಕೂಡಿಸೋಕೆ ಗೆರೆಯೊಂದು ಬೇಕೆ ಬೇಕು. ನಮ್ಮ ಸಂಬಂಧವೂ ಹಾಗೇ ಎಂದು ರಾಮಾಚಾರಿ ಹೇಳುತ್ತಾನೆ. ಹೀಗೆ ರಂಗೋಲಿ...