ಭಾರತ, ಏಪ್ರಿಲ್ 17 -- ಹಿಂದೂ ಧರ್ಮದಲ್ಲಿ ಹಲವು ದೇವರುಗಳನ್ನು ಪೂಜಿಸಲಾಗುತ್ತದೆ. ಅವುಗಳಲ್ಲಿ ಶ್ರೀರಾಮನು ಪ್ರಮುಖನಾಗಿದ್ದಾನೆ. ರಾಮ ಭಕ್ತರಿಗೆ ರಾಮ ನವಮಿ ಬಹಳ ಮುಖ್ಯವಾದ ಹಬ್ಬ. ಶ್ರೀರಾಮನು ಅವನ ಆದರ್ಶಗಳಿಂದಲೇ ಜನರ ಮನಸ್ಸಿನಲ್ಲಿ ನೆಲೆಸಿರುವ ದೇವರು. ಅನಾದಿ ಕಾಲದಿಂದಲೂ ಶ್ರೀರಾಮನ ಆದರ್ಶಗಳು ಜನಪ್ರಿಯ. ಶ್ರೀರಾಮನನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಇದೆ. ಧೈರ್ಯ ಸಾಹಸದ ಜೊತೆಗೆ ಕರುಣೆ, ಪ್ರೀತಿ, ಜಗತ್ತಿನ ಎಲ್ಲಾ ಜೀವಿಗಳನ್ನು ಗೌರವಿಸುವ ಗುಣವನ್ನು ಭಗವಾನ್‌ ರಾಮನಲ್ಲಿ ಎಲ್ಲರೂ ಕಾಣಬಹುದಾಗಿದೆ. ಇದನ್ನು ರಾಮಯಣವನ್ನು ಓದುವುದರ ಮೂಲಕ ತಿಳಿದುಕೊಳ್ಳಬಹುದು. ರಾಮ ನವಮಿಯಂದು ಶ್ರೀರಾಮನನ್ನು ಶೃದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಜೊತೆಗೆ ಉಪವಾಸ ವ್ರತಾಚರಣೆಗಳನ್ನು ಮಾಡಲಾಗುತ್ತದೆ. ರಾಮನನ್ನು ಭಕ್ತಿಯಿಂದ ಪೂಜಿಸುವುದರಿಂದ ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದು. ರಾಮನಾಮ ಭಜಿಸುವುದರಿಂದಲೇ ಅದೆಷ್ಟೋ ಕಷ್ಟಗಳು ಪರಿಹಾರವಾಗುತ್ತವೆ. ಶ್ರೀರಾಮ ಜಯರಾಮ ಜಯ ಜಯ ರಾಮ ಎನ್ನುವುದು ಶಾ...