ಭಾರತ, ಮಾರ್ಚ್ 31 -- ಬಾಲಿವುಡ್‌ ಚಿತ್ರರಂಗದಲ್ಲಿ ದಿವಂಗತ ನಟ ರಾಜ್ ಕುಮಾರ್ ತಮ್ಮ ವಿಶಿಷ್ಟ ಶೈಲಿಯ ಅಭಿನಯಕ್ಕೆ ಖ್ಯಾತಿ ಪಡೆದಿದ್ದರು. ಅವರ ಕೋಪಕ್ಕೆ ಸಂಬಂಧಪಟ್ಟಂತೆ ಹಲವು ಕಥೆಗಳು ಇವೆ. ಸಂದರ್ಶನವೊಂದರಲ್ಲಿ ರಾಜ್‌ಕುಮಾರ್‌ ಅವರ ಸ್ನೇಹಿತನ ಮಗ ರಾಜಾ ಮುರಾದ್‌ ಅವರು ದಿವಂಗತ ನಟನ ಕೋಪದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. "ಆ ಸಮಯದಲ್ಲಿ ಕೋಪಗೊಂಡು ಒಬ್ಬ ವ್ಯಕ್ತಿಯನ್ನು ತುಂಬಾ ಹೊಡೆದಿದ್ದರಿಂದ ಅವನು ಸತ್ತನು . ರಾಜ್ ಕುಮಾರ್ ದೀರ್ಘಕಾಲದಿಂದ ಕೊಲೆ ಪ್ರಕರಣವನ್ನು ಎದುರಿಸುತ್ತಿದ್ದರು. ನಂತರ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿತು" ಎಂದು ಅವರು ಮಾಹಿತಿ ನೀಡಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐ ಜತೆಗಿನ ಸಂದರ್ಶನದಲ್ಲಿ ರಾಜಾ ಮುರಾದ್‌ ಈ ರೀತಿ ಹೇಳಿದ್ದಾರೆ. "ಒಮ್ಮೆ ರಾಜ್ ಸರ್ ಜುಹು ಬೀಚ್‌ನಲ್ಲಿ ತಮ್ಮ ಸ್ನೇಹಿತ ಮತ್ತು ಅವರ ಗೆಳತಿಯೊಂದಿಗೆ ಇದ್ದರು. ಅಲ್ಲಿ ಯಾರೋ ಮಹಿಳೆಯ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದ್ದಾರೆ. ರಾಜ್ ಸರ್ ತುಂಬಾ ಕೋಪಗೊಂಡರು. ಅವರು ಆ ವ್ಯಕ್ತಿಯನ್ನು ಎಷ್ಟು ಹೊಡೆದರು ಎಂದರೆ ಅವನು ಸತ್ತನು. ...