Bengaluru, ಮೇ 6 -- ಈ ತಾರೀಖಿನಂದು ಜನಿಸಿದವರು ಆತ್ಮೀಯರ ಮನದಲ್ಲಿರುವ ಋಣಾತ್ಮಕ ಭಾವನೆಗಳನ್ನು ದೂರ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಕೆಲಸ ಕಾರ್ಯಗಳನ್ನು ಆರಂಭಿಸುವ ಬಗ್ಗೆ ದಿಢೀರ್ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಕೆಲವೊಮ್ಮೆ ಇವರು ತಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಮರೆತು ಬೇರೆಯವರಿಗೆ ಸಹಾಯ ಮಾಡುತ್ತಾರೆ. ಬೇರೆಯವರ ಯಶಸ್ಸಿನಲ್ಲಿ ಮುಖ್ಯ ಪಾತ್ರವಹಿಸುತ್ತಾರೆ. ಇವರ ಜೀವನದಲ್ಲಿ ಸದಾಕಾಲ ಒಳ್ಳೆಯ ಬದಲಾವಣೆಗಳು ಕಂಡುಬರುತ್ತವೆ.

ಈ ದಿನಾಂಕದಂದು ಜನಿಸಿದವರು ಕುಟುಂಬದ ಪ್ರತಿಷ್ಠೆಯನ್ನು ಉಳಿಸಲು ಯಾವುದೇ ತ್ಯಾಗ ಮಾಡುತ್ತಾರೆ. ಆದರೆ ನಿಮ್ಮ ಕೆಲಸ ಕಾರ್ಯದ ವೈಖರಿಯನ್ನು ಕಂಡು ಹೊಟ್ಟೆಕಿಚ್ಚು ಪಡುವ ಮಂದಿ ಸುತ್ತಮುತ್ತ ಇರುತ್ತಾರೆ. ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಸುಲಭವಾದ ಯಶಸ್ಸು ದೊರೆಯುತ್ತದೆ. ಸಮಾಜದ ಒಳಿತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಓದಲಾಗದ ಜನರಿಗೆ ಹಣದ ಸಹಾಯ ಮಾತ್ರವಲ್ಲದೆ ತಮ್ಮಲ್ಲಿರುವ ಜ್ಞಾನವನ್ನು ಹಂಚುತ್ತಾರೆ. ಅಶಕ್ತ ವಯೋವೃದ್ಧರಿಗೆ ಊರುಗೋಲಾಗಿ ಜನರ ಮನಸ್ಸನ್ನು ಗೆಲ...