Mysuru, ಮಾರ್ಚ್ 13 -- Mysore Crime News: ಅವರಿಬ್ಬರೂ ಹಲವಾರು ವರ್ಷಗಳಿಂದ ಆತ್ಮೀಯ ಸ್ನೇಹಿತರು. ಜತೆಯಲ್ಲಿಯೆ ಹೆಚ್ಚು ಹೊತ್ತು ಕಳೆಯೋರು. ಕಷ್ಟ ಸುಖಗಳನ್ನು ಹಂಚಿಕೊಳ್ಳೋರು. ಒಬ್ಬ ಮಹಿಳೆ ಪೊಲೀಸ್‌ ನೌಕರರ ಪತ್ನಿ. ಇನ್ನೊಬ್ಬಾಕೆ ಅಡುಗೆ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದವರು. ಆತ್ಮೀಯರಾಗಿದ್ದ ಕಾರಣದಿಂದ ಎರಡು ಕುಟುಂಬಗಳ ನಡುವೆ ಒಡನಾಟವೂ ಚೆನ್ನಾಗಿತ್ತು. ಆದರೆ ಇವರಲ್ಲಿ ಒಬ್ಬ ಮಹಿಳೆ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಳು. ಅಲ್ಲಲ್ಲಿ ಹಣ ಹೊಂದಿಸಿ ಸಾಕಾಗಿ ಹೋಗಿತ್ತು. ಸ್ನೇಹಿತೆಯೊಂದಿಗೂ ಈ ವಿಚಾರ ಮಾತನಾಡಿದ್ದಳು ಕೂಡ. ಆದರೆ ಕಳೆದ ವಾರ ಅದೇನಾಯಿತೋ. ಸಾಲ ತೀರಿಸಲು ಆಕೆ ದೊಡ್ಡ ಸ್ಕೆಚ್‌ ಅನ್ನೇ ಹಾಕಿದಳು. ಸ್ನೇಹಿತೆಯನ್ನು ಕೊಂದು ಆಕೆಯ ಚಿನ್ನದ ಸರ ಎಗರಿಸುವ ಯೋಜನೆ ಹಾಕಿ ಅದನ್ನು ಕಾರ್ಯಗತಗೊಳಿಸಿದಳು. ಸ್ನೇಹಿತೆಯನ್ನು ಕೊಂದು ಚಿನ್ನಾಭರಣ ಕದ್ದು ಈಗ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾಳೆ.

ಈ ಘಟನೆ ನಡೆದಿರುವುದು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಹಾಗೂ ಪಾರಂಪರಿಕ ನಗರಿ ಎನ್ನುವ ಅಭಿದಾನಕ್ಕೆ ಪಾತ್ರವ...