Melkote, ಏಪ್ರಿಲ್ 12 -- ಮೇಲುಕೋಟೆಯಲ್ಲಿ ಹತ್ತು ದಿನಗಳಿಂದ ವೈರಮುಡಿ ಉತ್ಸವದ ಸಡಗರ. ಶುಕ್ರವಾರ ಕಲ್ಯಾಣಿಯಲ್ಲಿ ವೈಭವದ ತೆಪ್ಪೋತ್ಸವ ಜರುಗಿತು.

ಮೇಲುಕೋಟೆಯಲ್ಲಿ ವಿಭಿನ್ನವಾಗಿ ಅಲಂಕಾರ ಮಾಡಲಾಗಿದ್ದ ತೆಪ್ಪದಲ್ಲಿ ಚಲುವನಾರಾಯಣಸ್ವಾಮಿ ಉತ್ಸವ ಮೂರ್ತಿ ಇರಿಸಿ ತೆಪ್ಪೋತ್ಸವನ್ನು ಆಚರಿಸಲಾಯಿತು.

ಮೇಲುಕೋಟೆಯ ಕಲ್ಯಾಣಿ ಆವರಣವನ್ನು ವೈರಮುಡಿ ಉತ್ಸವದ ತೆಪ್ಪೋತ್ಸಕ್ಕೆ ವಿಶೇಷ ಅಣಿಗೊಳಿಸಲಾಗಿತ್ತು. ಈ ವೇಳೆ ಪಟಾಕಿ ಸಿಡಿತವೂ ಬಾನಂಗಳದಲ್ಲಿ ಗಮನ ಸೆಳಯಿತು,

ತೆಪ್ಪೋತ್ಸವಕ್ಕಾಗಿ ಮೇಲುಕೋಟೆ ಕಲ್ಯಾಣಿ ಜಗಮಗಿಸುವ ಬೆಳಕಿನ ವೈಭವದಲ್ಲಿ ಕಂಡಿದ್ದು ಹೀಗೆ.

ಮೇಲುಕೋಟೆ ತೆಪ್ಪೋತ್ಸವ ಹಿನ್ನೆಲೆಯಲ್ಲಿ ಕಲ್ಯಾಣಿಗೆ ರೂಪಿಸಿದ ಅಲಂಕಾರ ಹಿನ್ನೆಲೆಯಲ್ಲಿ ಭಕ್ತಸಾಗರ ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದಿತು.

ವೈರಮುಡಿ ಬ್ರಹ್ಮೋತ್ಸವದ ಭಾಗವಾಗಿ ಕಲ್ಯಾಣಿಯಲ್ಲಿ ನಡೆದ ಚೆಲುವನಜಲವಿಹಾರದ ವೈಭವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.ಡಿಸಿ ಡಾ.ಕುಮಾರ್‌ ಭಾಗಿಯಾದರು.

ಭವ್ಯವಾಗಿ ಅಲಂಕೃತವಾದ ತೆಪ್ಪೋತ್ಸವ ಮಂಟಪದಲ್ಲಿ ಶ್ರೀಚೆಲುವನಾರಾಯಣಸ...