Tumkur, ಫೆಬ್ರವರಿ 22 -- ಬೆಂಗಳೂರು: ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳ ಇರುವಾಗಲೇ ಪಕ್ಷಾಂತರ ಪರ್ವ ಜೋರಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ಹಲವು ನಾಯಕರು ಸೇರುತ್ತಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಬಲ ಟಿಕೆಟ್‌ ಆಕಾಂಕ್ಷಯಾಗಿರುವ ಮಾಜಿ ಸಂಸದರೂ ಆಗಿರುವ ಎಸ್‌.ಪಿ. ಮುದ್ದ ಹನುಮೇಗೌಡ ಅವರು ಗುರುವಾರ ಕಾಂಗ್ರೆಸ್‌ ಗೆ ಮರಳಿದ್ಧಾರೆ.

ಇದನ್ನೂ ಓದಿರಿ: Siddaramaiah Case: ಕಿಕ್‌ ಬ್ಯಾಕ್‌ ಪ್ರಕರಣ ಕೈ ಬಿಡಲು ನ್ಯಾಯಾಲಯ ನಿರಾಕರಣೆ; ಸಿದ್ದರಾಮಯ್ಯಗೆ ಸಂಕಷ್ಟ, ತನಿಖೆಗೆ ಆದೇಶ

ಈ ಹಿಂದೆ ಸಂಸದರಾಗಿದ್ದ ಮುದ್ದಹನುಮೇಗೌಡ ಅವರು ಕಳೆದ ಬಾರಿ ಜಾ.ದಳದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದ್ದರಿಂದ ಪಕ್ಷ ಬಿಟ್ಟಿದ್ದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಇಲ್ಲಿ ಸಮ್ಮಿಶ್ರ ಅಭ್ಯರ್ಥಿಯಾಗಿ ಸೋತಿದ್ದರು. ಈಗ ಮುದ್ದಹನುಮೇಗೌಡರು ಬಿಜೆಪಿಯಲ್ಲಿದ್ದರು. ಮೈತ್ರಿ ಬದಲಾಗಿ ಜೆಡಿಎಸ್‌ ಹಾಗೂ ಬಿಜೆಪಿ ಒಂದಾಗಿರುವುದರಿಂದ ಅವರು ಕಾಂಗ್ರೆಸ್‌ಗೆ ಮರಳಿದ್ದಾರೆ. ಮುದ್ದಹನುಮೇಗೌಡರು ಒಮ್...