Mandya, ಫೆಬ್ರವರಿ 23 -- ಮಂಡ್ಯ: ಲೋಕಸಭೆ ಚುನಾವಣೆಗೆ ಇನ್ನೂ ದಿನಾಂಕಗಳು ಪ್ರಕಟವಾಗದೇ ಇದ್ದರೂ ರಾಜಕಾರಣಕ್ಕೆ ಹೆಸರುವಾಸಿಯಾದ ಮಂಡ್ಯದಲ್ಲಿ ಈಗಾಗಲೇ ಅಭ್ಯರ್ಥಿಯಾರಾಗಬಹುದು ಎನ್ನುವ ಚರ್ಚೆಗಳು ಜೋರಾಗಿದೆ. ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್‌ ಮೈತ್ರಿ ಬದಲಾಗಿದೆ. ಹಿಂದಿನ ಬಾರಿ ಕೈ ಕುಲುಕಿ ಈ ಬಾರಿ ಕಮಲವನ್ನು ಹಿಡಿದುಕೊಂಡಿದೆ. ಮಂಡ್ಯದಲ್ಲಿ ನಟಿ ಹಾಗೂ ಸಂಸದೆ ಸುಮಲತಾ ಕಳೆದ ಬಾರಿ ಜೆಡಿಎಸ್‌ ಅನ್ನು ಸೋಲಿಸಿದ್ದರು. ನಂತರ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಈ ಬಾರಿ ಮೈತ್ರಿ ಕಾರಣಕ್ಕೆ ಇಲ್ಲಿ ಜೆಡಿಎಸ್‌ ಸ್ಪರ್ಧೆ ಖಚಿತ. ಇದರಿಂದ ಸುಮಲತಾ ರಾಜಕೀಯ ನಡೆ ಹೇಗಿರಬಹುದು ಎನ್ನುವ ಚರ್ಚೆ ಹುಟ್ಟುಹಾಕಿದೆ. ಜೆಡಿಎಸ್‌ನಿಂದ ಯಾರು ಅಭ್ಯರ್ಥಿಯಾಗಬಹುದು. ಕಾಂಗ್ರೆಸ್‌ ಯಾವ ರೀತಿಯ ತಂತ್ರ ಹೆಣೆಯಲಿದೆ ಎನ್ನುವ ಚರ್ಚೆಗಳಿಗೇನೂ ಮಂಡ್ಯದಲ್ಲಿ ಕಡಿಮೆಯೇನೂ ಇಲ್ಲ.

ಇದನ್ನೂ ಓದಿರಿ: Explainer: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕದಲ್ಲಿ ಹೊಸದೇನಿದೆ

2019ರಲ್ಲಿ ಗೆದ್ದು 5 ವರ್ಷ ಸಂ...