Bangalore, ಏಪ್ರಿಲ್ 28 -- Lightning Safety Tips: ಸಿಡಿಲಿನಿಂದ ಸಾವು ನೋವು ಸಂಭವಿಸಿದ ಪ್ರಕರಣಗಳು ಇತ್ತೀಚನ ವರ್ಷಗಳ ಮುಂಗಾರು ಮಳೆಗಳಲ್ಲಿ ಅಧಿಕವಾಗುತ್ತಿದೆ. ಮುಂಗಾರು ಮಳೆ ಸಂಧರ್ಭದಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಿಡಿಲಿನ ಅವಘಡಗಳು ಹೆಚ್ಚಾಗಿದೆ. ಈ ಬಾರಿ ಬೇಸಿಗೆಯಲ್ಲೂ ಸಿಡಿಲಿಗೆ ಕೆಲವರು ಜೀವ ಕಳೆದುಕೊಂಡ ಘಟನೆ ನಡೆದಿವೆ. ಸಿಡಿಲಿನಿಂದ ಮನುಷ್ಯರು ಮಾತ್ರವಲ್ಲದೆ ವಿವಿಧ ಪಶು, ಪ್ರಾಣಿಗಳು ಕೂಡ ಸಾಯುತ್ತಿವೆ. ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು, ದನ ಕುರಿ ಕಾಯುವವರು. ಸಿಡಿಲನ್ನು ತಪ್ಪಿಸಲಾಗದು. ಆದರೆ, ಅದರಿಂದಾಗುವ ಸಾವು ನೋವುಗಳನ್ನು ತಪ್ಪಿಸಬಹುದು. ಸಿಡಿಲಿನಿಂದ ರಕ್ಷಣೆ ಹೇಗೆ ಸಾಧ್ಯ, ಈ ಕುರಿತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ, ಕಂದಾಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಈ ಬಗ್ಗೆ ತಿಳಿದುಕೊಳ್ಳುವ ಜತೆಗೆ ಇನ್ನೊಬ್ಬರಿಗೆ ಮಾಹಿತಿ ನೀಡುವುದು ಸೂಕ್ತ ಎಂದು ಪರಿಸರ ಪರಿವಾರ ಬಳಗವು ಮನವಿ ಮಾಡಿದೆ.

ಧಾರಕಾರ ಮಳೆ ಸುರಿದಾಗ ಸಿಡಿಲ...