Koppal, ಏಪ್ರಿಲ್ 8 -- Koppal Travel: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅಶೋಕ ಶಿಲಾಶಾಸನ ಮತ್ತು ಕೊಪ್ಪಳ ಕೋಟೆ ಚಾರಣ ಸಾಹಸ ಕಾರ್ಯಕ್ರಮವನ್ನು ಏಪ್ರಿಲ್ 20 ರಂದು ಆಯೋಜಿಸಲಾಗಿದ್ದು, ಜಿಲ್ಲೆಯ ಆಸಕ್ತ ಯುವಕ/ಯುವತಿಯರು, ಯುವ ಉತ್ಸಾಹಿಗಳು ಹಾಗೂ ಎಲ್ಲಾ ವಯೋಮಾನದವರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು.ಈ ಆಯೋಜನೆಗಾಗಿ ಕೆಲವು ನಿಭಂದನೆಗಳನ್ನು ಸೂಚಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರವೇಶ ಶುಲ್ಕ ರೂ.50 ನಿಗದಿಪಡಿಸಲಾಗಿದೆ.

ಚಾರಣ ಆಯೋಜನೆ ಸಮಯ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಆಗಿದ್ದು, ಚಾರಣ ಪ್ರಾರಂಭದ ಸ್ಥಳ ಕೊಪ್ಪಳ ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣ ಆಗಿದೆ. ಎಲ್ಲಾ ವಯೋಮಿತಿಯವರು ಭಾಗವಹಿಸಲು ಅವಕಾಶವಿರುತ್ತದೆ. 10 ವರ್ಷ ಒಳಗಿನ ವಯೋಮಿತಿಯ ಮಕ್ಕಳು ಇದ್ದರೆ ಅವರೊಂದಿಗೆ ಪಾಲಕರು ಕಡ್ಡಾಯವಿರಬೇಕು. ಚಾರಣಕ್ಕೆ ಬರುವವರು ಕಡ್ಡಾಯವಾಗಿ ನೀರಿನ ಬಾಟಲ್, ಕರವಸ್ತ್ರ ಮತ್ತು ತಮಗೆ ಅಗತ್ಯವಿರುವ ವಸ್ತುಗಳನ್ನು ತಾವೇ ತರಬೇಕು. ಮಾರ್ಗದರ್ಶಕರ ಮಾರ್ಗದರ್ಶನದಂತ...