Bengaluru, ಫೆಬ್ರವರಿ 2 -- Karnataka Weather: ನಿನ್ನೆಯಷ್ಟೇ ಕೇಂದ್ರದ ಮಧ್ಯಂತರ ಬಜೆಟ್‌ ಮುಗಿದಿದೆ. ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು ಜುಲೈನಲ್ಲಿ ಹೊಸ ಸರ್ಕಾರ ಮತ್ತೆ ಬಜೆಟ್‌ ಮಂಡಿಸಲಿದೆ. ಜನರು ತಮ್ಮ ತಮ್ಮ ಕ್ಷೇತ್ರಗಳಿಗೆ ಬಜೆಟ್‌ನಿಂದ ಏನೆಲ್ಲಾ ದೊರೆಯಿತು ಎಂಬ ಬಿಸಿ ಬಿಸಿ ಚರ್ಚೆಯಲಿದ್ದಾರೆ. ಇದರೊಂದಿಗೆ ವಾತಾವರಣ ಕೂಡಾ ಬಿಸಿ ತಾಪಮಾನ ಸ್ವಲ್ಪ ಸ್ವಲ್ಪವೇ ಹೆಚ್ಚಾಗುತ್ತಿದೆ.

ಕೆಲವೆಡೆ ಮುಂಜಾನೆ ಮುಂಜು ಮುಸುಕಿದ ವಾತಾವರಣ ಇದ್ದು ಚಳಿಯ ಅನುಭವವಾದರೆ ಬೆಳಗ್ಗೆ 10ರ ನಂತರ ಲಘುವಾಗಿ ಸೆಕೆ ಆರಂಭವಾಗಿದೆ. ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ ಗುರುವಾರ ರಾಜ್ಯಾದ್ಯಂತ ಒಣಹವೆ ಇತ್ತು. ಯಾವುದೇ ಮಳೆಯ ಪ್ರಮಾಣ ವರದಿಯಾಗಿಲ್ಲ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ 2.1 ಡಿಗ್ರಿ ಸೆಲ್ಸಿಯಸ್‌ನಿಂದ 4.0 ಡಿ.ಸೆವರೆಗೆ ದಾಖಲಾಗಿದೆ. ಕರಾವಳಿಯಲ್ಲಿ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ 2.0 ಡಿ.ಸೆ. ನಿಂದ +2.0 ಡಿ.ಸೆವರೆಗೆ ದಾಖಲಾಗಿದೆ. ಹಾಗೇ ದಕ್ಷಿಣ ಒಳನಾಡಿನ ಒಂ...