Raichur, ಏಪ್ರಿಲ್ 15 -- Karnataka Summer 2025: ಕರ್ನಾಟಕದಲ್ಲಿ ಎರಡು ವಾರದ ಬಳಿಕ ಬಿಸಿಲಿನ ಪ್ರಮಾಣ ಮತ್ತೆ ಏರಿಕೆ ಕಂಡಿದೆ. ಅದರಲ್ಲೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿರುವುದು ಕಂಡು ಬಂದಿದೆ. ಏಪ್ರಿಲ್14ರ ಬೆಳಗ್ಗೆ 8.30 ರಿಂದ ಏಪ್ರಿಲ್ 15ರ ಬೆಳಗ್ಗೆ 8.30 ರವರೆಗೆ ಕರ್ನಾಟಕದ ಜಿಲ್ಲಾವಾರು ಗರಿಷ್ಟ ಹಾಗೂ ಕನಿಷ್ಠ ತಾಪಮಾನ ದಾಖಲಾದ ವಿವರದಂತೆ ರಾಯಚೂರಿನಲ್ಲಿಯೇ ಅತ್ಯಧಿಕ ಉಷ್ಣಾಂಶ ದಾಖಲಾಗಿದೆ. ಕಲಬುರಗಿ, ಧಾರವಾಡ, ಹಾವೇರಿ, ಗದಗ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ಚಿತ್ರದುರ್ಗದಲ್ಲಿ ಉಷ್ಣಾಂಶ ಪ್ರಮಾಣವು 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲೂ ಉಷ್ಣಾಂಶ ಪ್ರಮಾಣ ಹೆಚ್ಚಳವಾಗಿದೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಘಟಕವು ತಿಳಿಸಿದೆ.
Published by HT Digital Content Services with permission from HT Kannada....
Click here to read full article from source
To read the full article or to get the complete feed from this publication, please
Contact Us.