Bangalore, ಮಾರ್ಚ್ 7 -- Karnataka Budget 2025: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್‌ 2025 ರಲ್ಲಿ ಗೃಹ ಇಲಾಖೆಗೆ ಹೆಚ್ಚಿನ ಒತ್ತು ನೀಡಬೇಕಿತ್ತು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಅದರಲ್ಲೂ ಕರ್ನಾಟಕದಲ್ಲಿ ಮೂರು ದಶಕದಿಂದ ಭಾರೀ ತಲೆನೋವಾಗಿದ್ದ ನಕ್ಸಲ್‌ ಚಟುವಟಿಕೆಗೆ ಈಗ ಸಂಪೂರ್ಣ ಬ್ರೇಕ್‌ ಬಿದ್ದಿದೆ. ಇದರಿಂದ ಬಜೆಟ್‌ನಲ್ಲಿಯೇ ಕರ್ನಾಟಕದ ನಕ್ಸಲ್‌ ನಿಗ್ರಹ ಘಟಕವನ್ನು ಬಂದ್‌ ಮಾಡುವ ಘೋಷಣೆ ಮಾಡಲಾಗಿದೆ. ಆದರೆ ಭಾರತದಲ್ಲೇ ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗುವ ನಂಬರ್‌ 1 ರಾಜ್ಯವಾಗಿರುವ ಕರ್ನಾಟಕದಲ್ಲಿ ಸೈಬರ್‌ ಅಪರಾಧ ನಿಗ್ರಹ ನಿಟ್ಟಿನಲ್ಲಿ ಬರೀ 5 ಕೋಟಿ ರೂ. ಒದಗಿಸಿರುವುದು ಕಡಿಮೆಯಾಯಿತು. ಕನಿಷ್ಠ 100 ಕೋಟಿ ರೂ.ಗಳನ್ನಾದರೂ ಒದಗಿಸಬೇಕಿತ್ತು. ಜನ ಕೋಟ್ಯಂತರ ಹಣ ಕಳೆದುಕೊಳ್ಳುತ್ತಿರುವುದರಿಂದ ಸೈಬರ್‌ ಅಪರಾಧ ನಿಗ್ರಹ ಚಟುವಟಿಕೆ ಬಲಗೊಳ್ಳಬೇಕು ಎನ್ನುವ ಸಲಹೆ ಗಟ್ಟಿಯಾಗಿದೆ.

ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ನಮ್ಮ ಸರ್ಕಾರವು ಹೆಚ್ಚುತ್ತಿರುವ ಸೈಬರ್‌ ಅಪರಾಧ ಮತ್ತು ಮಾದಕ ದ...