Kalaburgi, ಏಪ್ರಿಲ್ 8 -- Karnataka 2nd PUC Result 2025: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಕಳಪೆ ಸಾಧನೆ ಮಾಡಿವೆ. ಪ್ರಮುಖ ರಾಜಕಾರಣಿಗಳಾದ ಪ್ರಿಯಾಂಕ್‌ ಖರ್ಗೆ, ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ಡಾ. ಶರಣಪ್ರಕಾಶ್‌ ಪಾಟೀಲ್‌. ಶಿವರಾಜ ತಂಗಡಗಿ, ಎನ್‌.ಎಸ್.ಬೋಸರಾಜು ಇರುವ ಜಿಲ್ಲೆಗಳಲ್ಲಿನ ಪಿಯುಸಿ ಫಲಿತಾಂಶದ ಸಾಧನೆಗೆ ಜನರ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ರಾಜಕಾರಣಿಗಳ ಅನಾದಾರದಿಂದಲೇ ನಮ್ಮ ಭಾಗದ ಜಿಲ್ಲೆಗಳಲ್ಲಿನ ಮಕ್ಕಳು ನಿರೀಕ್ಷಿತ ಫಲಿತಾಂಶ ಪಡೆಯಲು ಆಗುತ್ತಿಲ್ಲ. ಜಿಲ್ಲೆಗಳು ಹಿಂದೆ ಬೀಳಲು ರಾಜಕಾರಣಿಗಳೇ ಕಾರಣ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಫಲಿತಾಂಶದ ಪ್ರತಿಯನ್ನು ಉಲ್ಟಾ ಪೋಸ್ಟ್‌ ಮಾಡುವ ಮೂಲಕ ಈ ರೀತಿಯಲ್ಲಾದರೂ ನಮ್ಮ ಜಿಲ್ಲೆಗಳನ್ನು ಟಾಪ್‌ ಸ್ಥಾನದಲ್ಲಿ ನೋಡೋಣ ಎಂದು ಕಾಲೆಳೆದಿದ್ಧಾರೆ.

Published by HT Digital Content Services with permission from HT Kannada....