ಬೆಂಗಳೂರು, ಮಾರ್ಚ್ 25 -- Kannappa Movie: ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ನಟಿಸಿರುವ, ಪ್ರಭಾಸ್‌, ಅಕ್ಷಯ್‌ ಕುಮಾರ್‌ ಮುಂತಾದವರು ಅತಿಥಿ ಪಾತ್ರಗಳಲ್ಲಿ ನಟಿಸಿರುವ ಕಣ್ಣಪ್ಪ ಸಿನಿಮಾದ ಕುರಿತು ನಟ ರಘುಬಾಬು ನೀಡಿರುವ ಹೇಳಿಕೆಯ ಕುರಿತು ನೆಟ್ಟಿಗರು ಕೋಪಗೊಂಡಿದ್ದಾರೆ. ಕಣ್ಣಪ್ಪ ಸಿನಿಮಾದ ಕುರಿತು ಟ್ರೋಲ್‌ ಮಾಡಬೇಡಿ. ಟ್ರೋಲ್‌ ಮಾಡಿದ್ರೆ ಶಿವನ ಕೋಪ, ಶಾಪಕ್ಕೆ ತುತ್ತಾಗುವಿರಿ ಎಂದು ಈ ಹಾಸ್ಯ ನಟ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಕನ್ನಡದಲ್ಲಿ ಬೇಡರ ಕಣ್ಣಪ್ಪ ಸಿನಿಮಾ ಬಂದಿರುವುದು ನಿಮಗೆ ಗೊತ್ತು. ಇದೇ ಕಥೆಯ ಸಿನಿಮಾವನ್ನು ದೊಡ್ಡಮಟ್ಟದಲ್ಲಿ ತೆಲುಗಿನಲ್ಲಿ ನಿರ್ಮಿಸಲಾಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ದಕ್ಷಿಣ ಭಾರತದ ಹಾಸ್ಯ ನಟ ರಘು ಬಾಬು ಅವರು ನೀಡಿದ ಹೇಳಿಕೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಶಿವ ಮತ್ತು ಶಿವ ಭಕ್ತ ಕಣ್ಣಪ್ಪನ ಕುರಿತಾದ ಈ ಸಿನಿಮಾದ ಕುರಿತು ರಘುಬಾಬು ಹೇಳಿಕೆ ನೀಡಿದ್ದಾರೆ. "ಯಾರಾದರೂ ಕಣ್ಣಪ್ಪ ಸಿನಿಮಾದ...