Chennai, ಏಪ್ರಿಲ್ 11 -- K Ponmudy: ಸಾರ್ವಜನಿಕ ಸಮಾರಂಭ ಒಂದರಲ್ಲಿ ಭಾಷಣ ಮಾಡಿದ ತಮಿಳುನಾಡಿನ ಅರಣ್ಯ ಸಚಿವ ಕೆ ಪೊನ್‌ಮುಡಿ, ಶೈವ, ವೈಷ್ಣವರನ್ನು ಅವಹೇಳನ ಮಾಡಿ ವಿವಾದಕ್ಕೀಡಾಗಿದ್ದಾರೆ. ಕೆ ಪೊನ್‌ಮುಡಿ ಅವರ ಕೀಳು ಅಭಿರುಚಿಯ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಕೂಡಲೇ, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ಕೆ ಪೊನ್‌ಮುಡಿ ಅವರನ್ನು ಡಿಎಂಕೆಯ ಜನರಲ್‌ ಸೆಕ್ರಟರಿ ಸ್ಥಾನದಿಂದ ವಜಾಗೊಳಿಸಿದರು. ಇದಕ್ಕೂ ಮೊದಲು, ಡಿಎಂಕೆ ನಾಯಕಿ ಕೆ ಕನ್ನಿಮೋಳಿ ಕೂಡ ಕೆ ಪೊನ್‌ಮುಡಿ ಅವರ ಭಾಷಣವನ್ನು ತೀವ್ರವಾಗಿ ಖಂಡಿಸಿದ್ದರು.

ಡಿಎಂಕೆ ನಾಯಕರೂ ಆಗಿರುವ ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಅವರು ಪ್ರಕಟಣೆಯೊಂದನ್ನು ಹೊರಡಿಸಿ, ಕೆ ಪೊನ್‌ಮುಡಿ ಅವರನ್ನು ಪಕ್ಷದ ಜನರಲ್ ಸೆಕ್ರೆಟರಿ ಸ್ಥಾನದಿಂದ ವಜಾಗೊಳಿಸಿರುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಅವರು ಪ್ರತ್ಯೇಕ ಕಾರಣವನ್ನು ಉಲ್ಲೇಖಿಸಿಲ್ಲ. ಕೆ ಪೊನ್‌ಮುಡಿ ಅವರು ಶೈವ- ವೈಷ್ಣವರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ನೀಡಿದ ಬೆನ್ನಿಗೆ, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ...