Bengaluru, ಮೇ 3 -- ಆರೋಗ್ಯವೇ ಭಾಗ್ಯವೆಂಬ ಗಾದೆ ಮಾತು ಎಲ್ಲಾ ಕಾಲಗಳಲ್ಲೂ ಬಹಳ ಸತ್ಯವಾದ ಮಾತಾಗಿದೆ. ಬಹಳಷ್ಟು ಜನರು ಆರೋಗ್ಯವಿಲ್ಲದೆ ಅನೇಕ ಕಾಯಿಲೆಗಳಿಗೆ ತುತ್ತಾಗಿ, ಬಳಲುತ್ತಿದ್ದಾರೆ. ಆಧುನಿಕ ಜೀವನ ಪದ್ಧತಿಯಿಂದಾಗಿ ದೇಹಕ್ಕೆ ಅಗತ್ಯವಾಗಿ ಪೂರೈಕೆಯಾಗಬೇಕಿದ್ದ ಪೋಷಕಾಂಶ, ಖನಿಜ, ಪ್ರೋಟೀನ್ನ ಕೊರತೆ ಎದುರಿಸುತ್ತಿದ್ದಾರೆ. ಅದರ ಪರಿಣಾಮವಾಗಿ ಆರೋಗ್ಯ ಹದಗೆಡುತ್ತಿದೆ. ದೇಹಕ್ಕೆ ಖನಿಜಗಳು ಅತ್ಯಗತ್ಯವಾಗಿ ಬೇಕು. ಖನಿಜಗಳ ಕೊರತೆಯು ಅನೇಕ ರೋಗಗಳನ್ನು ತರುತ್ತದೆ. ದೇಹದ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವಂತಹ ಮಹತ್ವದ ಕೆಲಸ ಮಾಡುವ ಖನಿಜವೆಂದರೆ ಅದು ಕಬ್ಬಿಣ. ಕಬ್ಬಿಣದ ಕೊರತೆಯಿಂದ ದೇಹದಲ್ಲಿ ಆಯಾಸ ಉಂಟಾಗುತ್ತದೆ. ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ಕಬ್ಬಿಣದ ಕೊರತೆಯನ್ನು ನೀಗಿಸಿ, ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಕಬ್ಬಿಣ-ಭರಿತ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯವಾಗಿದೆ. ಕಬ್ಬಿಣದ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಅದರ ಕ...
Click here to read full article from source
To read the full article or to get the complete feed from this publication, please
Contact Us.