ಭಾರತ, ಮಾರ್ಚ್ 11 -- ಭಾರತದ ಮುಕುಟದಂತಿರುವ ಕಾಶ್ಮೀರ ಪ್ರವಾಸ ಮಾಡಬೇಕು ಅನ್ನೋದು ಬಹುತೇಕ ಹಲವರ ಆಸೆ-ಕನಸು. ಈಗಂತೂ ಭಾರಿ ಸೆಕೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬಹುತೇಕ ಎಲ್ಲಾ ಕಡೆ ತಾಪಮಾನ ಹೆಚ್ಚಾಗಿದ್ದು, ಬಿಸಿಲಿಗೆ ಬೆಂದ ಜನ ತಂಪಾದ ವಾತಾವರಣ ಇಷ್ಟಪಡುತ್ತಾರೆ. ಹೀಗಾಗಿ ಕಾಶ್ಮೀರವೋ, ಮನಾಲಿಯೋ ಸುತ್ತಾಡಲು ಇದು ಸಕಾಲ. ನಿಮ್ಮ ಪ್ರವಾಸ ಪಟ್ಟಿಗೆ ಈ ಬಾರಿ ಕಾಶ್ಮೀರವನ್ನು ಸೇರಿಸಬಹುದು. ಏಕೆಂದರೆ ಐಆರ್ಸಿಟಿಸಿಯು (IRCTC) ಕಾಶ್ಮೀರ ಟೂರ್ ಪ್ಯಾಕೆಜ್ ಘೋಷಿಸಿದ್ದು, 6 ದಿನಗಳ ಪ್ರವಾಸವನ್ನು ನೀವು ಆನಂದಿಸಬಹುದು. ಬೆಂಗಳೂರಿನಿಂದ ಆರಂಭವಾಗಿ 5 ರಾತ್ರಿ ಮತ್ತು 6 ದಿನ ಕಾಶ್ಮೀರದಲ್ಲಿ ಕಳೆಯಬಹುದು.
ಬೆಂಗಳೂರಿನ ಐಆರ್ಸಿಟಿಸಿಯೊಂದಿಗೆ ಭೂಮಿಯ ಮೇಲಿನ ಸ್ವರ್ಗ ಕಾಶ್ಮೀರದ ಸೌಂದರ್ಯವನ್ನು ಸವಿಯಬಹುದು. ಪ್ರವಾಸಪ್ರಿಯರು ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಸ್ವರ್ಗಕ್ಕೆ ಭೇಟಿ ನೀಡಬೇಕೆಂಬ ಕನಸು ಕಾಣುತ್ತಾರೆ. ಇಲ್ಲಿನ ಚಿನಾರ್ ಮರಗಳು, ದಟ್ಟವಾದ ದೇವದಾರು ಕಾಡುಗಳು, ಸೇಬಿನ ತೋಟ, ಕೇಸರಿ ಹೊಲಗಳು, ಹಿಮಾವೃತ ಪರ್ವತಗಳು, ಗಿ...
Click here to read full article from source
To read the full article or to get the complete feed from this publication, please
Contact Us.