ಭಾರತ, ಮಾರ್ಚ್ 14 -- IRCTC Kashi Tour Package: ಭಾರತವು ದೇವಾಲಯಗಳ ನಾಡು. ನಮ್ಮ ದೇಶದಲ್ಲಿ ಸಾಕಷ್ಟು ಪ್ರಸಿದ್ಧ ದೇಗುಲಗಳಿವೆ. ಆದರೆ ಹಿಂದೂಗಳು ಜೀವನದಲ್ಲಿ ಒಮ್ಮೆಯಾದ್ರೂ ಕಾಶಿಗೆ ಹೋಗಬೇಕು, ಕಾಶಿಯಾತ್ರೆ ಮಾಡಬೇಕು ಎಂದು ಬಯಸುತ್ತಾರೆ. ಅದಕ್ಕೆ ಕಾರಣ ಕಾಶಿ ವಿಶ್ವನಾಥ ಸನ್ನಿಧಾನಕ್ಕೆ ತೆರಳಿದರೆ ಈ ಜನ್ಮಕ್ಕೆ ಮೋಕ್ಷ ಸಿಗುತ್ತದೆ ಎನ್ನುವ ನಂಬಿಕೆ. ಕರ್ನಾಟಕದಿಂದ ಕಾಶಿ ಬಹಳ ದೂರ ಇರುವ ಇಲ್ಲಿಗೆ ಹೋಗಿ ಬರುವುದು ಎಲ್ಲರಿಗೂ ಸುಲಭ ಏನಲ್ಲ. ಹಾಗಂತ ಚಿಂತಿಸುವ ಅಗತ್ಯವಿಲ್ಲ.

ಕಾಶಿಗೆ ಹೋಗಬೇಕು ಎನ್ನುವ ಆಸೆ ಇರುವವರಿಗೆ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ಘೋಷಿಸಿದೆ. ಮಾತ್ರವಲ್ಲ ಕಾಶಿ ಯಾತ್ರೆಗೆ ಹೋದವರಿಗೆ ಕರ್ನಾಟಕ ಸರ್ಕಾರವು ಹಣ ಸಹಾಯವನ್ನೂ ನೀಡಲಿದೆ. ಈ ಟೂರ್‌ ಪ್ಯಾಕೇಜ್‌ನಲ್ಲಿ ನೀವು ಕಾಶಿ ಮಾತ್ರವಲ್ಲ ರಾಮನ ಜನ್ಮಸ್ಥಳ ಅಯೋಧ್ಯೆಗೆ ತೆರಳಿ ರಾಮಮಂದಿರವನ್ನೂ ನೋಡಿ ಬರಬಹುದು. ಈ ಪ್ಯಾಕೇಜ್ ಕುರಿತ ಇನ್ನಷ್ಟು ವಿವರ ಇಲ್ಲಿದೆ.

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ಒಟ್ಟು 8 ರಾತ್ರಿ, 9 ದಿನಗಗಳ ಪ್ಯಾಕೇಜ್ ಆಗಿದೆ. ವಾರಣಸಿ,...