Bengaluru, ಜನವರಿ 27 -- Indian Railways: ಭಾರತೀಯ ರೈಲ್ವೆಯು ಕರ್ನಾಟಕದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ದಿಗೆ ಇನ್ನಿಲ್ಲದ ಒತ್ತು ನೀಡುತ್ತಿದೆ. ಬೆಂಗಳೂರು ಭಾಗದಲ್ಲಿ 1,043.63 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಮತ್ತು ಯಾರ್ಡ್ ಮರುವಿನ್ಯಾಸ ಯೋಜನೆಗಳು ಸುರಕ್ಷತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಹೊಂದಿವೆ. 485 ಕೋಟಿ ರೂ. ವೆಚ್ಚದಲ್ಲಿ 1,568 ರೂಟ್ ಕಿ ಮೀ ನಲ್ಲಿ ಕವಚ್ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತಿದ್ದು, ಮತ್ತೊಂದು 2,148 ಕಿ ಮೀ ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ. 13.87 ಕಿ.ಮೀ ಡಬ್ಲಿಂಗ್ ಮತ್ತು 7.3 ಕಿ.ಮೀ ಹೊಸ ಮಾರ್ಗಗಳನ್ನು ನಿಯೋಜಿಸುವುದರೊಂದಿಗೆ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ.
ಬೆಂಗಳೂರು ಬೈಪಾಸ್ ಮಾರ್ಗವನ್ನು (6.14 ಕಿ.ಮೀ) 248 ಕೋಟಿ ರೂ. ಅನುಮೋದಿಸಲಾಗಿದೆ. ಜೊತೆಗೆ 1,556 ಕಿ.ಮೀ ವ್ಯಾಪ್ತಿಯ 12 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ, ಇದರಲ್ಲಿ ಪ್ರಮುಖ ವಿಭಾಗಗಳನ್ನು ದ್ವಿಗುಣಗೊಳಿಸಲು...
Click here to read full article from source
To read the full article or to get the complete feed from this publication, please
Contact Us.